ಮುದಗಲ್: ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಗಲಾಪುರ ವಿವಿಧೋದ್ದೇಶ ಪ್ರಾಕೃಪಸ ಸಂಘದ ಅದ್ಯಕ್ಷ ಶರಣಬಸವ ವ್ಯಾಕರನಾಳ ಹೇಳಿದರು.

ಡಾ.ಅಂಬೇಡ್ಕರ್ ಜಯಂತಿ ನಿಮಿತ್ತ ಪಟ್ಟಣದ ಮೇಸ್ತಿ ಪೇಟೆ ಬುದ್ಧನಗರದಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ದಾರಿಯುದ್ದಕ್ಕೂ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. ಪ್ರಮುಖರಾದ ಸಂಜೀವ ಚಲುವಾದಿ, ಮೌನೇಶ ಚಲುವಾದಿ, ಮೌನೇಶ ಬಡೀಗೇರ, ಹುಲಗಪ್ಪ ಚಲುವಾದಿ, ಸುರೇಶ ಬಡಿಗೇರ, ಬಸವರಾಜ ದೊಡ್ಡಮನಿ, ರಾಜು, ವಿನೋದ ಚಲುವಾದಿ ಇತರರಿದ್ದರು.