ಆನ್‌ಲೈನ್ ವಂಚಕರ ಬಲೆಗೆ ಬೀಳದಿರಿ

Don't fall into the trap of online scammers

ಮಹಾಲಿಂಗಪುರ: ಗ್ರಾಮ ವಾಸ್ತವ್ಯದ ಮೂಲಕ ಅಕ್ರಮ ಚಟುವಟಿಕೆ ನಿಯಂತ್ರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

blank

ಸಮೀಪದ ಮದಭಾವಿ ಗ್ರಾಮದಲ್ಲಿ ಆಯೋಜಿಸಿರು ಗ್ರಾಮ ವಾಸ್ತವ್ಯದಲ್ಲಿ ಶುಕ್ರವಾರ ಮದಭಾವಿ, ಮಾರಾಪೂರ, ಸಂಗಾನಟ್ಟಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮದಲ್ಲಿನ ಸಮಸ್ಯೆ ಗಮನಕ್ಕೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಗ್ರಾಮದಲ್ಲಿ ಯವುದೇ ಕಾನೂನು ವಿರೋಧಿ ಚಟುವಟಿಕೆಗಳು ಕಂಡು ಬಂದರೆ ನಂ.112ಗೆ ಕರೆ ಮಾಡಿ ಮಾಹಿತಿ ನೀಡಿ. ಪ್ರತಿಯೊಬ್ಬರೂ ಪೊಲೀಸ್ ಇದ್ದ ಹಾಗೆ. ಎಲ್ಲೆಡೆ ಶಾಂತಿ ನೆಲೆಸಲು ಎಲ್ಲರೂ ಸಹಕಾರ ನೀಡಿ ಎಂದರು.

ಮಕ್ಕಳನ್ನು ಬಾಲ್ಯ ವಿವಾಹ ಕೂಪಕ್ಕೆ ದೂಡದೇ ಶಿಕ್ಷಣ ನೀಡಬೇಕು. ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಹಾಕಿ. ಕಾರು ಚಾಲಕರು ಸೀಟ್‌ಬೆಲ್ಟ್ ಹಾಕಿ ನಿಮ್ಮ ಪ್ರಾಣ ಉಳಿಸಿಕೊಳ್ಳಿ. ದುಡ್ಡಿನ ಆಸೆಗೆ ಆನ್‌ಲೈನ್ ವಂಚಕರ ಬಲೆಗೆ ಬೀಳದಿರಿ ಎಂದು ಸಲಹೆ ನೀಡಿದರು.

ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ಪೊಲೀಸ್ ಠಾಣೆಗೆ ಬರಲು ಹಿಂದೇಟು ಹಾಕುವವರ ಮನೆಗಳಿಗೆ ತೆರಳಿ, ಅವರ ಸಮಸ್ಯೆ ಆಲಿಸಿ ಪರಿಹಾರ ಪಡೆಯುವುದು ಗ್ರಾಮ ವಾಸ್ತವ್ಯದ ಉದ್ದೇಶ ಎಂದರು.

ಮುಖಂಡ ಮಹಾದೇವ ಮೇಟಿ ಮಾತನಾಡಿ, ದ್ವಿಚಕ್ರವಾಹನ ಸವಾರರಿಗೆ ಕಡ್ಡಾಯವಾಗಿ ಲೈಸನ್ಸ್ ಪಡೆಯುವಂತೆ ಮಾಡಬೇಕು. ಅದಕ್ಕಾಗಿ ಸರ್ಕಾರದ ವತಿಯಿಂದ ಮಹಾಲಿಂಗಪುರ ಪಟ್ಟಣದಲ್ಲಿ ಕ್ಯಾಂಪ್ ಮಾಡಿ ಲೈಸನ್ಸ್ ನೀಡಬೇಕು ಎಂದರು.

ಮೀರಾ ತಟಗಾರ ಮಾತನಾಡಿ, ಮಾರ್ಗಗಳಿಗೆ ನಾಮಲಕ ಅಳವಡಿಸಬೇಕು ಎಂದರು.

ಸಿಪಿಐ ಸಂಜೀವ ಬಳಿಗಾರ, ಪಿಎಸ್‌ಐ ಕಿರಣ ಸತ್ತಿಗೇರಿ, ಮಹಿಳಾ ಪಿಎಸ್‌ಐ ಮಧು ಎಲ್., ಮುಖಂಡರಾದ ಅಣ್ಣೇಶಗೌಡ ಉಳ್ಳಾಗಡ್ಡಿ, ವಿನೋದ ಉಳ್ಳಾಗಡ್ಡಿ, ಮಹ್ಮದ್ ಹೂಲಿಕಟ್ಟಿ, ಲಗಮಣ್ಣ ಮಾದರ, ನಾಗಪ್ಪ ಡುಮ್ಮಣ್ಣವರ, ಜಯಶ್ರೀ ತಿಮ್ಮಾಪುರ, ಹನಮಂತ ಮಾದರ, ವಿಠ್ಠಲ ಮುಧೋಳ, ಬಸವರಾಜ ಘಂಟಿ, ನಾಗಯ್ಯ ಮಠಪತಿ, ಸಿದ್ದಪ್ಪ ಜೈನರ, ಮುತ್ತಪ್ಪ ಕೋಲುರ, ಎಂ.ಎಂ. ಮಠ ಇದ್ದರು. ರವಿ ಕಲ್ಲೋಳಿ ನಿರೂಪಿಸಿದರು.

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank