ಪೊಲೀಸರ ಕಟ್ಟುಕಟ್ಟಿನ ಕ್ರಮವೇ ಸಾವು ತಂದಿತಾ?; ಎದೆನೋವಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮರಣ

ಕಾರ್ಕಳ: ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು, ವಿನಾಕಾರಣ ಬೀದಿಗಿಳಿದವರಿಗೆ ಲಾಠಿ ಏಟು ಬೀಳುತ್ತಿದ್ದು, ಅವರ ವಾಹನಗಳ ಜಪ್ತಿಯೂ ನಡೆಯುತ್ತಿದೆ. ಆದರೆ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಲೇ ಇಲ್ಲೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ತೀವ್ರ ಎದೆನೋವಿಗೆ ಒಳಗಾಗಿದ್ದ ಮಹಿಳೆ ಮಂಜುಳಾ ಎಂಬಾಕೆಯನ್ನು ಸಂಬಂಧಿಕರು ವಾಹನದಲ್ಲಿ ಕರೆಯುತ್ತಿದ್ದಾಗ, ಮಾರ್ಗಮಧ್ಯೆ ಚೆಕ್​ಪೋಸ್ಟ್​ನಲ್ಲಿ ತಡೆದಿದ್ದು, ಖಾಸಗಿ ವಾಹನಕ್ಕೆ ಪ್ರವೇಶವಿಲ್ಲ, ಬೇಕಿದ್ದರೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯಿರಿ ಎಂದಿದ್ದಾರೆ. ಹೀಗಾಗಿ ಅಲ್ಲಿಂದ ಹಿಂದಕ್ಕೆ ಬಂದ ಸಂಬಂಧಿಕರು ಬೇರೊಂದು ಒಳದಾರಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. … Continue reading ಪೊಲೀಸರ ಕಟ್ಟುಕಟ್ಟಿನ ಕ್ರಮವೇ ಸಾವು ತಂದಿತಾ?; ಎದೆನೋವಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮರಣ