ನೇತಾಜಿ ಕನಸು ನನಸಾಗಿಸೋಣ

ಕೊಪ್ಪಳ: ನೇತಾಜಿ ಸುಭಾಷಚಂದ್ರಬೋಸ್​ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಅವುಗಳನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಿದೆ ಎಂದು ವಿದ್ಯಾರ್ಥಿ ಮುಖಂಡ ಗಂಗರಾಜ ಅಳ್ಳಳ್ಳಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎಐಡಿವೈಒ, ಎಐಡಿಎಸ್​ಒ ಹಾಗೂ ಎಐಎಂಎಸ್​ಎಸ್​ ಸಂಟನೆಗಳಿಂದ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷಚಂದ್ರ ಬೋಸ್​ ದಿನಾಚರಣೆಯಲ್ಲಿ ಮಾತನಾಡಿದರು.

ನೇತಾಜಿ ಆದರ್ಶಗಳು ಇಂದಿಗೂ ಪ್ರಸ್ತುತ. ಅವರ ಕನಸಿನ ಭಾರತದ ನಿಮಾರ್ಣ ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿ. ಇದನ್ನು ನಾವೆಲ್ಲರೂ ಸಾಕಾರಗೊಳಿಸಬೇಕಿದೆ. ಅಧ್ಯಯನ ನಡೆಸಬೇಕು. ನೇತಾರರ ಬಗ್ಗೆ ಅರಿಯಬೇಕು. ಬೋಸ್​ ಅವರ ಚಿಂತನೆ, ವಿಚಾರ, ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.

ಶಾರದಾ ಗಡ್ಡಿ ಮಾತನಾಡಿ, ಪ್ರಪಂಚದ ಇತಿಹಾಸದಲ್ಲಿಯೇ ವಿಶೇಷ ಎನಿಸುವ ಮಹಿಳಾ ರೆಜಿಮೆಂಟ್​ ಸ್ಥಾಪಿಸಿದ ನೇತಾಜಿ, ಪುರುಷರಂತೆ ಮಹಿಳೆಯರೂ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಬಲ್ಲರು ಎಂಬುದು ತೋರಿಸಿದರು. ಐಎನ್​ಎ ಸ್ಥಾಪಿಸಿ ರಾಜಿ ರಹಿತ ಹೋರಾಟ ಮಾಡಿದರು. ಬ್ರಿಟಿಷರಲ್ಲಿ ಹೆದರಿಕೆ ಸೃಷ್ಟಿಸಿದ್ದರು. ದೇಶಕ್ಕೆ ಸ್ವಾತಂತ್ರ$್ಯ ದೊರೆಯುವಲ್ಲಿ ಅವರ ಪಾತ್ರ ಬಹುವಾಗಿದೆ ಎಂದರು ಹೇಳಿದರು.

ದೇವರಾಜ ಹೊಸಮನಿ ಮಾತನಾಡಿ, ಶೋಷಣಾ ರಹಿತ ಸಮಾಜ ಸ್ಥಾಪನೆ ನೇತಾಜಿ ಕನಸು. ಇಂದು ಪ್ರಾಮಾಣಿಕರು ಬೀದಿಯಲ್ಲಿ ಬದುಕುವಂತಾಗಿದೆ. ಶಿಕ್ಷಣ, ಆರೋಗ್ಯ ದುಬಾರಿಯಾಗಿದೆ. ನಿರುದ್ಯೋಗ ಹೆಚ್ಚಿದೆ ಎಂದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್​, ಸದಾಶಿವ ಮುನಿರಾಬಾದ್​, ಸುಭಾನ್​ ನೀರಲಗಿ ಇತರರಿದ್ದರು.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…