ಕೊಪ್ಪಳ: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸ್ಲಂಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಡಿಎಚ್ಒ ಡಾ.ಟಿ.ಲಿಂಗರಾಜು ಸಲಹೆ ನೀಡಿದರು.
ನಗರದ ಜಿಪಂ ಜೆಎಚ್ ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾನ್ಸರ್ ಅಸಾಂಕ್ರಾಮಿಕ ರೋಗ. ಪುರುಷರಲ್ಲಿ ಬಾಯಿ, ಶ್ವಾಶಕೋಶ, ಅನ್ನನಾಳ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಗರ್ಭಕಂಠ, ಸ್ತನ ಹಾಗೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ವಾಸಿಯಾಗದ ಗಾಯ, ಅಸಹಜ ರಕ್ತಸ್ರಾವ, ಬಹುದಿನದ ಕೆಮ್ಮು, ನೋವಿಲ್ಲದ ಗಡ್ಡೆ, ಊತ ಕ್ಯಾನ್ಸರ್ ಲಕ್ಷಣಗಳಾಗಿರಬಹುದು. ಇವುಗಳು ಕಾಣಿಸಿಕೊಂಡಲ್ಲಿ ರ್ನಿಲಸದೇ ಪರೀೆ ಮಾಡಿಸಿಕೊಳ್ಳಿ. ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ. ಸಿರಿಧಾನ್ಯ ಸೇವಿಸಿ. ಹೊರಗಿನ ತಿಂಡಿ ಹೆಚ್ಚಾಗಿ ತಿನ್ನದಿರಿ. ತರಕಾರಿ, ಹಣ್ಣು ಸೇವನೆಗೆ ಆದ್ಯತೆ ನೀಡಿ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್ ಮಾತನಾಡಿ, ಇಲಾಖೆಯಿಂದ ಬರುವ ವರ್ಷದಿಂದ 30 ವರ್ಷ ಮೇಲ್ಪಟ್ಟವರಿಗೂ ಕ್ಯಾನ್ಸರ್ ಉಚಿತ ತಪಾಸಣೆ ಮಾಡಲಾಗುವುದೆಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ್ ಎಂ.ಎಚ್., ಡಾ.ವೆಂಟಕೇಶ, ಡಾ.ಪ್ರಕಾಶ ಎಚ್., ಡಾ.ಸುರೇಖಾ, ಡಾ.ರಾಜು, ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಇತರರಿದ್ದರು.