ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಅಡಿ ಫಲಾನುಭವಿಗಳಿಗೆ ಉಚಿತವಾಗಿ ವೀಲ್ ಚೇರ್, ವಾಟರ್ ಬೆಡ್, ಹಾಗೂ ವಾತ್ಸಲ್ಯ ಕಿಟ್ಗಳನ್ನು ಚೆನ್ನಂಗಿ ಕಾರ್ಯಕ್ಷೇತ್ರದಲ್ಲಿ ಶನಿವಾರ ವಿತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ರಾಕೇಶ್ ಮಾತನಾಡಿ, ಗ್ರಾಮದ ಕಮಲಮ್ಮ ಎಂಬುವರು ಕಳೆದ ನಾಲ್ಕೈದು ವರ್ಷಗಳಿಂದ ಕಾಯಿಲೆಗೆ ತುತ್ತಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೇರ್ ಉಚಿತವಾಗಿ ನೀಡಲಾಗಿದೆ. ವಾತ್ಸಲ್ಯ ಕಿಟ್ಅನ್ನು ಸದಸ್ಯ ರಾಜು ಅವರಿಗೆ ಮತ್ತು ವಾಟರ್ ಬೆಡ್ ಅನ್ನು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗಣಪತಿ ಅವರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಶ್ರೀ ಜೈಮಿ, ಚನ್ನಂಗಿ ಕಾರ್ಯಕ್ಷೇತ್ರದ ಮಾಜಿ ಸೇವಾ ಪ್ರತಿನಿಧಿ ಶ್ರೀ ಯತೀಶ್ ಉಪಸ್ಥಿತರಿದ್ದರು.