ಸಣ್ಣು ಹನುಮಂತ ಗೌಡ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

blank

ಅಂಕೋಲಾ: ಶಿರೂರು ಗುಡ್ಡ ಕುಸಿತದ ಪರಿಣಾಮವಾಗಿ ಗಂಗಾವಳಿ ನದಿ ಉಕ್ಕಿ ಉಳುವರೆಯ ಸಣ್ಣು ಹನುಮಂತ ಗೌಡ ಕೊಚ್ಚಕೊಂಡು ಹೋಗಿದ್ದರು.

ಈ ದುರ್ಘಟನೆ ಸಂಭವಿಸಿ 8 ದಿನಗಳ ನಂತರ ಗೋಕರ್ಣ ಸಮೀಪದ ಗಂಗೆ ಕೊಳ್ಳದಲ್ಲಿ ಸಣ್ಣು ಗೌಡ ಅವರ ಮೃತದೇಹ ಪತ್ತೆಯಾಗಿತ್ತು. ಇದಾದ 24 ಗಂಟೆಯೊಳಗೆ ಸಣ್ಣು ಗೌಡಳ ಕುಟುಂಬಕ್ಕೆ ಶಾಸಕ ಸತೀಶ ಸೈಲ್ ಅವರು 5 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ಅನ್ನು ಮೃತಳ ಪುತ್ರ ಮಂಜುನಾಥ ಗೌಡನಿಗೆ ವಿತರಿಸಿ ಸಾಂತ್ವನ ಹೇಳಿದರು.


ಬಳಿಕ ಮಾತನಾಡಿದ ಅವರು, ಗುಡ್ಡ ಕುಸಿತ ದುರಂತದಲ್ಲಿ ಜಗನ್ನಾಥ ನಾಯ್ಕ ಕೂಡ ಒಬ್ಬರಾಗಿದ್ದು, ಅವರು ಈವರೆಗೂ ಪತ್ತೆಯಾಗಿಲ್ಲ. 3 ಹೆಣ್ಣು ಮಕ್ಕಳಿರುವ ಬಡ ಕುಟುಂಬದ ನಿರ್ವಹಣೆಗೆ ಆಧಾರವಾಗಲು ಬಿಕಾಂ ಪದವಿ ಪಡೆದಿರುವ ಹೆಣು ್ಣುಗಳೊಬ್ಬಳಿಗೆ ಮಾನವೀಯತೆ ಮತ್ತು ಅನುಕಂಪದಿಂದ ಸರ್ಕಾರದ ವತಿಯಿಂದ ಹೊರ ಗುತ್ತಿಗೆ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ಡಿಸಿ ಲಕ್ಷ್ಮೀಪ್ರಿಯಾ, ಎಸ್ಪಿ ನಾರಾಯಣ ಎಂ., ಎಸಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಅನಂತ ಶಂಕರ ಬಿ., ಅಂಕೋಲಾ ಜಿಪಂ ಎಇಇ ರಾಮು ಗುನಗಿ ಇತರರಿದ್ದರು.

Share This Article

ನರ ದೌರ್ಬಲ್ಯಕ್ಕೆ ನೆಲ್ಲಿಕಾಯಿಯೇ ರಾಮಬಾಣ! ಇದರ ಅನೇಕ ಪ್ರಯೋಜನಗಳ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Gooseberry

Gooseberry : ಪ್ರಕೃತಿಯಲ್ಲಿ ಹಲವು ರೀತಿಯ ಔಷಧಿಗಳಿವೆ. ಅವು ನಮ್ಮ ಕಣ್ಣಿಗೆ ಗೋಚರಿಸುತ್ತಿದ್ದರೂ ಅವುಗಳಲ್ಲಿರುವ ವಿಶೇಷ…

ಕೊರಿಯನ್ನರು, ಚೀನಿಯರು, ಜಪಾನಿಯರು ರಾತ್ರಿ ಹೊತ್ತು ಸ್ನಾನ ಮಾಡೋದೇಕೆ?ಅಚ್ಚರಿಯ ಮಾಹಿತಿ ಇಲ್ಲಿದೆ..! Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಿ! ಅನಾರೋಗ್ಯ ದೂರ ಮಾಡಿ…Mango

ಬೆಂಗಳೂರು: ( Mango ) ಬೇಸಿಗೆಯಲ್ಲಿ  ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.…