ಧಾರವಾಡದಿಂದ ವಯನಾಡು ಸಂತ್ರಸ್ತರಿಗೆ ಅಗತ್ಯ ವಸ್ತು ರವಾನೆ

blank

ಧಾರವಾಡ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಧಾರವಾಡದ ದಕ್ಷಿಣ ಭಾರತ ಕ್ರೖೆಸ್ತ ಮಹಾಸಭೆಯ ಕರ್ನಾಟಕ ಉತ್ತರ ಸಭಾಪ್ರಾಂತ ವ್ಯಾಪ್ತಿಯ 120 ಚರ್ಚ್​ಗಳಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಮಂಗಳವಾರ ಕಳುಹಿಸಲಾಯಿತು.

ಸಾಮಗ್ರಿಗಳಿದ್ದ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ ಸಭಾಪ್ರಾಂತದ ಕಾರ್ಯದರ್ಶಿ ವಿಜಯಕುಮಾರ್ ದಂಡಿನ್ ಮಾತನಾಡಿ, ನೋವಿನಲ್ಲಿರುವ ಜನರಿಗೆ ಸ್ಪಂದಿಸುವುದು ನಮ್ಮ ಧರ್ಮ. ನೊಂದವರ ಕಣ್ಣೀರು ಒರೆಸುವುದು ಮಾನವೀಯತೆ ಎಂದು ಸಾರಲು ಕೈಲಾದ ಸಹಾಯ ಮಾಡಿದ್ದೇವೆ ಎಂದರು.

ಸಭಾಪ್ರಾಂತ ವ್ಯಾಪ್ತಿಯ 120 ಚರ್ಚ್​ಗಳಿಂದ ಸಂಗ್ರಹಿಸಿದ ಸುಮಾರು 200 ಚೀಲ ಅಕ್ಕಿ, 150 ಆಹಾರದ ಕಿಟ್​ಗಳು, 200 ಲೀ. ಅಡುಗೆ ಎಣ್ಣೆ, ಸೋಪು, ಮಕ್ಕಳು, ಮಹಿಳೆಯರ ಉಡುಪುಗಳು, ಮಸಾಲ ಸಾಮಾಗ್ರಿಗಳು, ಔಷಧ, ಪಾತ್ರೆಗಳು, ಚಾಪೆಗಳನ್ನು ಟ್ರಕ್​ನಲ್ಲಿ ಕಳುಹಿಸಲಾಯಿತು.

ವಿಲ್ಸನ್ ಜೆ. ಮೈಲಿ, ಫಾದರ್ ಸುನಿಲ್​ಕುಮಾರ್, ಫಾದರ್ ಸುರೇಶ ನಾಯ್ಕರ್, ಫಾದರ್ ಆಲ್ಬರ್ಟ್ ಸೋನ್ಸ್, ಡೆರಿಕ್ ಕ್ರಿಸ್ಟೋಫರ್, ಫಾದರ್ ವಿಜಯ ನಾಯ್ಕರ್ ಹಾಗೂ ವಿಲ್ಸನ್ ಗುಡಸಲಮನಿ, ಇತರಿದ್ದರು.

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…