ಹುಬ್ಬಳ್ಳಿ : ಜಾತಿ ಗಣತಿಯಲ್ಲಿ ಜೈನ ಸಮಾಜಕ್ಕೆ ಅನ್ಯಾಯವಾಗಿದೆ. ಹೀಗಾಗಿ, ಸಮಾಜದ ಜನಸಂಖ್ಯೆಯ ನಿಖರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಇಂದಿನಿಂದ (ಏ. 17) ತಾವು ಹಾಗೂ ಇತರ ದಿಗಂಬರ ಮುನಿಗಳು ರಾಜ್ಯದಾದ್ಯಂತ ವಿಹಾರ (ಪಾದಯಾತ್ರೆ) ಕೈಗೊಳ್ಳುವುದಾಗಿ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದ್ದಾರೆ.
ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಧಾರವಾಡ, ಬೆಳಗಾವಿ, ಬಾಗಲಕೋಟ ಹಾಗೂ ಇನ್ನಿತರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಾನು ವಿಹಾರ ಕೈಗೊಳ್ಳುತ್ತೇನೆ. ಬೇರೆ ಸ್ವಾಮೀಜಿಗಳು ಇನ್ನಿತರ ಜಿಲ್ಲೆಗಳಲ್ಲಿ ವಿಹಾರ ನಡೆಸುತ್ತ, ಜನಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಸಚಿವ ಜಮೀರ ಅಹ್ಮದ್ ಅವರು ವಿಧಾನಸಭೆಯಲ್ಲಿ ಮಾತನಾಡುವಾಗ ರಾಜ್ಯದಲ್ಲಿ ಜೈನರ ಜನಸಂಖ್ಯೆ 20 ಲಕ್ಷ$$್ವಇದೆಯೆಂದು ತಿಳಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ 1.62 ಲಕ್ಷ ಜನರಿದ್ದಾರೆಂಬುದಾಗಿ ವರದಿಯಾಗಿದೆ. ಆದರೆ, ಯಾವ ರೀತಿ ಜಾತಿ ಗಣತಿ ಬಗ್ಗೆ ಸಾಕಷ್ಟು ಗೊಂದಲ ಇದೆ. ಸಮಾಜದ ಯಾರೊಬ್ಬರನ್ನೂ ಸಂಪಕಿರ್ಸದೇ ಅದು ಹೇಗೆ ಗಣತಿ ಮಾಡಿದರು ? ಎಂದು ಪ್ರಶ್ನಿಸಿದರು.
ಜಾತಿ ಗಣತಿಯಲ್ಲಿ ಜೈನ ಸಮಾಜದ ಬಗ್ಗೆ ತಪು$್ಪ ಅಂಕಿ ಅಂಶಗಳನ್ನು ನಮೂದಿಸಲಾಗಿದೆ. ಇದರಿಂದ ಸಮಾಜಕ್ಕೆ ಬೇಸರವಾಗಿದೆ. ಸಮಾಜದ ಅಭಿವೃದ್ಧಿಗೆ ತೊಂದರೆಯಾದರೆ ಸಹಿಸುವುದಿಲ್ಲ ಎಂದು ಹೇಳಿದರು.
ವಿಹಾರದ ಸಂದರ್ಭದಲ್ಲಿ ವಿವಿಧ ತಾಲೂಕುಗಳಲ್ಲಿ ಸಮಾಜದ ಸಭೆ ನಡೆಸಲಾಗುವುದು. ಸಮಾಜದ ಜನಸಂಖ್ಯೆಯನ್ನು ಸಂಗ್ರಹಿಸಿ, ಜೂನ್ 8ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರ ವರದಿ ಒಪ್ಪದಿದ್ದರೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರ ಮೊರೆ ಹೋಗುತ್ತೇವೆ. ಕಾನೂನು ಹೋರಾಟ ನಡೆಸುವ ಬಗ್ಗೆಯೂ ಚಿಂತಿಸುತ್ತೇವೆ ಎಂದು ತಿಳಿಸಿದರು.
ಮೇ 8ರಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐನಾಪುರದಲ್ಲಿ ಜೈನ ಸಮಾಜದ ಬೃಹತ್ ಸಭೆ ನಡೆಸಿ, ಮೇಲಿಂದ ಮೇಲೆ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚಚಿರ್ಸಲಾಗುವುದು. ಮುಂದಿನ ಹೋರಾಟದ ರೂಪರೇಷೆ ತೀರ್ಮಾನಿಸಲಾಗುವುದು ಎಂದು ಹೇಳಿದರು.