ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

blank

ಕರೊನಾ ವೈರಸ್​ ಮೊದಲು ಹುಟ್ಟಿದ್ದು ಚೀನಾದಲ್ಲಿ. ಆ ಅದೀಗ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ. ಅನೇಕ ದೇಶಗಳ ಆರ್ಥಿಕತೆ ಮಟ್ಟ ಸಂಪೂರ್ಣ ಕುಸಿದು ನಷ್ಟವುಂಟಾಗಿದೆ.

ಕರೊನಾ ಹುಟ್ಟಿಗೆ ಕಾರಣವಾದ ಚೀನಾವನ್ನು ಇತರೆ ಕೆಲ ದೇಶಗಳು ದೂಷಿಸುತ್ತಿದ್ದರೂ, ಬಹಿರಂಗವಾಗಿ ಯಾವುದೇ ಕ್ರಮಕ್ಕೂ ಮುಂದಾದ ಬಗ್ಗೆ ಮಾಹಿತಿಯಿಲ್ಲ.

ಆದರೆ ಈ ಮಧ್ಯೆ ಯುಕೆ ಮೂಲದ ಎಕ್ಸ್​ಪ್ರೆಸ್​ ಎಂಬ ಮಾಧ್ಯಮ ಪ್ರಕಟಿಸಿದೆ ಎನ್ನಲಾದ ಸುದ್ದಿಯ ಹೆಡ್​ಲೈನ್​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು.

ಕರೊನಾ ವೈರಸ್​ನಿಂದ ಆದ ನಷ್ಟದ ಲೆಕ್ಕವನ್ನು ತುಂಬಿಕೊಡಲು ಜರ್ಮನಿ, ಚೀನಾವನ್ನು ಕೇಳಿದೆ. 130 ಬಿಲಿಯನ್​ ಯುಕೆ ಪೌಂಡ್ಸ್​​ ಬಿಲ್​ ಕಳಿಸಿಕೊಟ್ಟಿದೆ ಎಂಬ ಅರ್ಥವನ್ನು ಕೊಡುವ ತಲೆಬರಹ ಇದಾಗಿತ್ತು. ಅದಕ್ಕೆ ಜರ್ಮನ್​ ಚಾನ್ಸಲರ್​ ಅಂಜೆಲಾ ಮಾರ್ಕೆಲ್​ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರ ಫೋಟೋವನ್ನು ಬಳಸಲಾಗಿತ್ತು.
ಭಾರತದಲ್ಲಿ ಈ ಲೇಖನ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ತಲೆಬರಹ ಮಾತ್ರ ಕಾಣುವಂತೆ ಫೇಸ್​​ಬುಕ್​, ಟ್ವಿಟರ್​ಗಳಲ್ಲಿ ಶೇರ್ ಮಾಡಿಕೊಂಡಿದ್ದ ನೆಟ್ಟಿಗರು, ಭಾರತವೂ ಇದೇ ಕ್ರಮ ಕೈಗೊಳ್ಳಬೇಕು. ಕರೊನಾ ನಷ್ಟ ಪರಿಹಾರವಾಗಿ 300 ಬಿಲಿಯನ್ ಪೌಂಡ್ಸ್​​ಗಳ ಬಿಲ್​ನ್ನು ಚೀನಾಕ್ಕೆ ಕಳಿಸಬೇಕು ಎಂದು ಒತ್ತಾಯಿಸಿದ್ದರು.

ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬೇರೆಯದ್ದೇ ವಿಷಯ ಬಹಿರಂಗವಾಗಿದೆ.

ಜರ್ಮನ್​ ಸರ್ಕಾರ ಅಂತಹ ಯಾವುದೇ ಬಿಲ್​​ನ್ನೂ ಚೀನಾಕ್ಕೆ ಕಳಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಆಗಿದ್ದಿಷ್ಟೇ..ಜರ್ಮನಿಯ ಬಿಲ್ಡ್​ ಎಂಬ ಟ್ಯಾಬ್ಲಾಯ್ಡ್​ ಸುದ್ದಿಪತ್ರಿಕೆ ಹೀಗೊಂದು ವರದಿ ಮಾಡಿತ್ತು. ಜರ್ಮನಿಯಲ್ಲಿ ಕೊವಿಡ್​ನಿಂದಾದ ನಷ್ಟವನ್ನು ಚೀನಾ ಭರಿಸಬೇಕು ಎಂದು ಹೇಳಿ, 130 ಬಿಲಿಯನ್ ಪೌಂಡ್ಸ್​ಗಳ ಅಣುಕು ಬಿಲ್​ ಒಂದನ್ನು ಪ್ರಕಟಿಸಿತ್ತು. ಆ ಸುದ್ದಿಯನ್ನು ಎಕ್ಸ್​ಪ್ರೆಸ್​ ವರದಿ ಮಾಡಿತ್ತು. ಆದರೆ ಎಕ್ಸ್​ಪ್ರೆಸ್​ ಸುದ್ದಿ ಮಾಧ್ಯಮ ಮಾಡಿದ್ದ ವರದಿಯ ತಲೆಬರಹ ತುಂಬ ತಪ್ಪು ಅರ್ಥವನ್ನು ಕೊಡುತ್ತಿತ್ತು. ಚೀನಾ ಸರ್ಕಾರವೇ ನೋಟಿಸ್​ ನೀಡಿದೆ ಎಂದು ಅನ್ನಿಸುವಂತಿತ್ತು. ಅದನ್ನು ಓದುವಷ್ಟೂ ತಾಳ್ಮೆ ಇಲ್ಲದ ಅನೇಕರು ಸ್ಕ್ರೀನ್​ಶಾಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಜರ್ಮನಿಯ ಕ್ರಮವನ್ನು ಹೊಗಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಅರ್ಥದೊಂದಿಗೆ ಸುದ್ದಿ ಶೇರ್​ ಆಗುತ್ತಿದೆ ಎಂಬುದನ್ನು ಶೀಘ್ರವೇ ಪತ್ತೆಹಚ್ಚಿದ ಎಕ್ಸ್​ಪ್ರೆಸ್​ ಬಳಿಕ ಹೆಡ್​ಲೈನ್​ ಬದಲು ಮಾಡಿದೆ. ಅಲ್ಲದೆ, ಸ್ಪಷ್ಟನೆಯನ್ನೂ ಪ್ರಕಟಿಸಿದೆ. (ಏಜೆನ್ಸೀಸ್​)

ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…