ಮಕ್ಕಳ ಸಾಹಿತ್ಯಕ್ಕೆ ಮೂಲ ತಾಯಿ, ರಾಷ್ಟ್ರೀಯ ಬಸವದಳದ ಗಂಗಾಧರ ದೊಡ್ಡವಾಡ

blank

ಧಾರವಾಡ: ಸಾಹಿತ್ಯ ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯವು ವಿಶೇಷತೆಯಿಂದ ಕೂಡಿದ್ದು ಮಕ್ಕಳ ಸಾಹಿತ್ಯದ ಮೂಲ ಶಿಶುವಿನ ತಾಯಿ ಮತ್ತು ಜನಪದ ಎಂದು ರಾಷ್ಟ್ರೀಯ ಬಸವದಳದ ಮಹಾಸಂಘಟನಾ ಕಾರ್ಯದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾರ್ಗದರ್ಶಕ ಮಂಡಳಿ ನಿರ್ದೇಶಕ ಗಂಗಾಧರ ದೊಡ್ಡವಾಡ ಹೇಳಿದರು.

blank

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಕ್ಕಳ ಕವಿ ಹಿರಿಯ ವಿದ್ವಾಂಸ  ಬಿ.ಕೆ. ಹೊಂಗಲ್ ಮಾಸ್ತರ ದಡೇರಕೊಪ್ಪ ಸೌಂದತ್ತಿ ರವರ 89ನೇ ಜನ್ಮ ದಿನಾಚರಣೆ ಅಂಗವಾಗಿ ಸೋಮನಾಥ ಹೊಂಗಲ್ ರವರು ಸ್ಥಾಪಿಸಿದ ದತ್ತಿ ನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳೇ ಕವಿಗಳು ಆಗಬೇಕು. ಅಂದಾಗ ಮಾತ್ರ ಮಕ್ಕಳ ಸಾಹಿತ್ಯಕ್ಕೆ ವಿಶೇಷ ಗೌರವ ದೊರೆಯುತ್ತದೆ. ಕನ್ನಡ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನು ಅಂಟಿಸುವವರೆಗೂ ಮಕ್ಕಳು ಕನ್ನಡ ಶಿಶು ಕವಿಗಳಾಗಲು ಸಾಧ್ಯವಿಲ್ಲ ಎಂದರು.

ಆಂಗ್ಲ ಭಾಷೆಯ ವ್ಯಾಮೋಹ ನಮ್ಮಲ್ಲಿ ದಿನದಿಂದ ದಿನಕ್ಕೆ ವಿಕಾಸ ಗೊಳ್ಳುತ್ತಲೇ ಇದೆ. ಆದರೆ ಕನ್ನಡದ ವಿದ್ಯಾರ್ಥಿಯನ್ನಾಗಿಸಲು ನಾವು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು

ಧಾರವಾಡ ಆಕಾಶವಾಣಿಯ ಹಿರಿಯ ಅಧಿಕಾರಿ ಶರಣಬಸವ ಚೋಳಿನ, ಮಕ್ಕಳ ಕವಿ ಬಿ.ಕೆ. ಹೊಂಗಲ ಮಾಸ್ತರ ಮಕ್ಕಳ ಶ್ರೇಷ್ಠ ಕವಿ 2025 ರ ಪ್ರಶಸ್ತಿ ವಿಜೇತ ಡಾ. ಆರ್.ಬಿ. ಚಿಲುಮಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಸಾಹಿತಿ ಡಾ. ಶಂಕರ್ ಹಲಗತ್ತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ವೀರಣ್ಣ ವಡ್ಡೀನ, ಡಾ. ಜಿನಧತ್ತ ಹಡಗಲಿ, ದತ್ತಿದಾನಿ ಸೋಮನಾಥ ಹೊಂಗಲ, ಡಾ. ಧನವಂತ ಹಾಜವಗೋಳ, ಮುತ್ತಣ್ಣ ತಿರ್ಲಾಪುರ ಮುಂತಾದವರು ಉಪಸ್ಥಿತರಿದ್ದರು.

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…