ಕರೊನಾ ಭೀತಿಗೆ ಪುಣೆಯಿಂದ ತಾಂಡಾಗಳಿಗೆ ಮರಳಿದ ಕೂಲಿಕಾರರು, ಹತ್ತು ತಾಂಡಾಗಳಲ್ಲಿ ಅಧಿಕಾರಿಗಳ ಬಿಡಾರ

blank

ದೇವದುರ್ಗ: ಉದ್ಯೋಗ ಅರಸಿ ಮಹಾರಾಷ್ಟ್ರದ ಪುಣೆಗೆ ದುಡಿಯಲು ಗುಳೆ ಹೋಗಿದ್ದ ತಾಲೂಕಿನ ಸುಮಾರು 10 ತಾಂಡಾಗಳ ಕೂಲಿಕಾರರು ಕರೊನಾ ಭೀತಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ತಮ್ಮ ತಾಂಡಾಗಳಿಗೆ ವಾಪಸ್ ಆಗಿದ್ದರಿಂದ ಭಾನುವಾರ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಾಂಡಾಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಮಹಾರಾಷ್ಟ್ರದಲ್ಲಿ ಕರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೂಲಿಕಾರರು ಆರೋಗ್ಯ ತಪಾಸಣೆಗೆ ಒಳಗಾಗದೇ ನೇರವಾಗಿ ತಾಂಡಾಗಳಿಗೆ ಲಾರಿಗಳಲ್ಲಿ ವಾಪಸ್ ಆಗಿದ್ದರು. ಇದು ತಾಂಡಾದ ಜನರಿಗೆ ಮಾತ್ರವಲ್ಲ ತಾಲೂಕಿನ ಜನರಲ್ಲೂ ಆತಂಕ ಉಂಟುಮಾಡಿತ್ತು. ಪುಣೆಯಿಂದ ವಾಪಸ್ ಆದ ಕೂಲಿಕಾರರ ಕುರಿತು ಗ್ರಾಮಸ್ಥರೇ ತಾಲೂಕು ಸೇರಿ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ 10 ತಾಂಡಾಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮದಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿತು. ಕೂಲಿಕಾರರನ್ನು ಥರ್ಮಲ್ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಮುಂಜಾಗ್ರತೆ ಕ್ರಮವಾಗಿ ಗ್ರಾಮಕ್ಕೆ ವಾಪಸ್ ಆದ ಜನರು ಬೇರೆ ಸ್ಥಳಕ್ಕೆ ಹೋಗದೆ, ನಿರಂತರವಾಗಿ ಆರೋಗ್ಯ ತಪಾಸಣೆ ಒಳಗಾಗುವಂತೆ ಸೂಚನೆ ನೀಡಲಾಯಿತು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…