ದೇವದಾಸಿ ಮಹಿಳೆಯರ ಕುಟುಂಬ ಗಣತಿ ನಡೆಯಲಿ

devadasi issue koppal memorandum submission to dc koppal

ಕೊಪ್ಪಳ: ದೇವದಾಸಿ ಮಹಿಳೆಯರ ಕುಟುಂಬದ ಗಣತಿ ನಡೆಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಸಂದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ನಲಿನ್​ ಅತುಲ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

blank
blank

ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಒಂದು ಲಕ್ಷಕ್ಕೂ ಅಧಿಕ ದೇವದಾಸಿ ಮಹಿಳೆಯರ ಕುಟುಂಬಗಳಿವೆ. ದೇಶಕ್ಕೆ ಸ್ವಾತಂತ್ರ$್ಯ ಬಂದು 76 ವರ್ಷಗಳಾಗಿವೆ. ದಲಿತರ ಅಭಿವೃದ್ಧಿ ಹೆಸರಿನಲ್ಲಿ ಲಾಂತರ ಕೋಟಿ ರೂ. ರ್ಖಚಾಗಿದೆ. ಆದರೂ ನಮ್ಮ ಅಭಿವೃದ್ಧಿ ಆಗಿಲ್ಲ. ದೌರ್ಜನ್ಯ ನಿಂತಿಲ್ಲ. ಗವರವ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಂಬಲಿಸುವಂತಾಗಿದೆ. ಸರ್ಕಾರಗಳು ದೇವದಾಸಿಯರ ಅಸಮರ್ಪಕ ಗಣಿತಿ ನಡೆಸಿವೆ. ಮರು ಗಣತಿ ಮಾಡುತ್ತಿಲ್ಲ. ಇದರಿಂದ ಅನೇಕರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ತಾಯಂದಿರ ಸಾವಿನಿಂದ ಮಕ್ಕಳು ಅನಾಥರಾಗುತ್ತಿದ್ದೇವೆಂದು ಅಳಲು ತೋಡಿಕೊಂಡರು.

ದೇವದಾಸಿ ಮಹಿಳೆ ಕುಟುಂಬಗಳ ಗಣತಿ ನಡೆಸಿ. ಪಜಾ ಅನುದಾನದಲ್ಲಿ ಶೇ.10ರಷ್ಟು ಮೀಸಲಿರಿಸಿ. ಎಲ್ಲ ದೇವದಾಸಿ ಮಕ್ಕಳಿಗೆ ಗುರುತು ಪತ್ರ ನೀಡಿ. ಮಾಸಾಶನ 6 ಸಾವಿರ ರೂ.ಗೆ ಹೆಚ್ಚಿಸಿ. ದೌರ್ಜನ್ಯದಿಂದ ದೇವದಾಸಿ ಪದ್ಧತಿಗೆ ದೂಡುವುದು ತಡೆಯಬೇಕು. ದೇವದಾಸಿ ಮಕ್ಕಳಿಗೆ ಎಲ್ಲ ಹಂತದ ಶಿಕ್ಷಣ ಉಚಿತ ನೀಡಿ. ವಿದ್ಯಾವಂತ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಿ. ಷರತ್ತುಗಳಿಲ್ಲದೇ 5 ಲಕ್ಷ ರೂ. ವಿವಾಹ ಪ್ರೋತ್ಸಾಹಧನ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯರಾದ ಮಂಜುನಾಥ ಡಗ್ಗಿ, ರಮೇಶ್​ ಬಡಿಗೇರ್​, ಹುಲಿಗೆಮ್ಮ, ಸುಂಕಪ್ಪ ಗದಗ, ಯಲ್ಲಪ್ಪ ಸೂಳೆಕಲ್​, ಯಮನೂರ ಡಗ್ಗಿ, ವೀರಭದ್ರ ಗಂಗಾವತಿ, ರಮೇಶ್​ ಕೊಪ್ಪಳ, ಹುಲುಗಪ್ಪ ಗೋಕಾವಿ ಇತರರಿದ್ದರು.

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…