ಸಂತೋಷ ವೈದ್ಯ ಹುಬ್ಬಳ್ಳಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಅವಳಿನಗರದ ಇಂದಿರಾ ಕ್ಯಾಂಟೀನ್ಗಳ ಮೂಲಕ ಉಚಿತವಾಗಿ ಪೂರೈಸುವ ಆಹಾರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ವಿುಕರು, ವಲಸಿಗರು ಹಾಗೂ ಬಡವರು ಇಂದಿರಾ ಕ್ಯಾಂಟೀನ್ ಅನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ನಲ್ಲಿ ನಿತ್ಯ ಆಹಾರ ಸೇವಿಸುವ ಜನರ ಸಂಖ್ಯೆಯನ್ನು ಲೆಕ್ಕ ಇಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಂಕಿ ಅಂಶಗಳು ಇದನ್ನೇ ಹೇಳುತ್ತಿರುವುದು.
ಕರೊನಾ 2ನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮೇ 10ರಿಂದ 24ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಈ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ಗಳ ಮೂಲಕ ಕೂಲಿ ಕಾರ್ವಿುಕರು, ವಲಸಿಗರು, ದುರ್ಬಲ ವರ್ಗದವರಿಗೆ ಉಚಿತವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಪೂರೈಸಬೇಕೆಂದು ಪೌರಾಡಳಿತ ನಿರ್ದೇಶನಾಲಯ ಸೂಚಿಸಿದೆ.
ಅದರಂತೆ ಮೇ 12ರಿಂದ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿರುವ 9 ಇಂದಿರಾ ಕ್ಯಾಂಟೀನ್ಗಳ ಮೂಲಕ ಸಂಬಂಧಪಟ್ಟವರಿಗೆ ಉಚಿತವಾಗಿ ಉಪಾಹಾರ, ಊಟ ಒದಗಿಸಲಾಗುತ್ತಿದೆ. ಮೂರೇ ದಿನಗಳಲ್ಲಿ ಬೆಳಗ್ಗೆ ಉಪಾಹಾರ ಸೇವಿಸುವವರ ಸಂಖ್ಯೆ 2700ರಿಂದ 4250ಕ್ಕೆ, ಮಧ್ಯಾಹ್ನದ ಊಟ ಸೇವಿಸುವವರ ಸಂಖ್ಯೆ 2243ರಿಂದ 3949ಕ್ಕೆ ಹಾಗೂ ರಾತ್ರಿ ಭೋಜನ ಸೇವಿಸುವವರ ಸಂಖ್ಯೆ 1090ರಿಂದ 2059ಕ್ಕೆ ಏರಿಕೆಯಾಗಿದೆ. ಮೊದಲಿನಂತೆ ಕ್ಯಾಂಟೀನ್ ಆವರಣದಲ್ಲಿ ಆಹಾರ ಸೇವಿಸಲು ಅವಕಾಶವಿಲ್ಲ. ಪಾರ್ಸೆಲ್ ನೀಡಲಾಗುತ್ತಿದೆ.
ಲಾಕ್ಡೌನ್ ಪೂರ್ವ ಬೆಳಗಿನ ಉಪಾಹಾರಕ್ಕೆ 5 ರೂ. ಹಾಗೂ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಭೋಜನಕ್ಕೆ ತಲಾ 10 ರೂ. ನಿಗದಿಪಡಿಸಲಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಹೋಟೆಲ್, ರೆಸ್ಟೋರೆಂಟ್ಗಳು ಬಂದ್ ಇದೆ. ಕೆಲವರು ಮಾತ್ರ ಪಾರ್ಸೆಲ್ ಸರ್ವಿಸ್ ನಡೆಸುತ್ತಿದ್ದಾರೆ. ಹೀಗಿರುವಾಗ ಇಂದಿರಾ ಕ್ಯಾಂಟೀನ್ನಿಂದ ಉಚಿತ ಆಹಾರ ಪೂರೈಕೆಯು ಬಡವರಿಗೆ, ಕೂಲಿ ಕಾರ್ವಿುಕರಿಗೆ ಅನುಕೂಲವಾಗಿದೆ.
ಧಾರವಾಡದ ಹೊಸ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನ ಸೌಧ, ಹುಬ್ಬಳ್ಳಿಯ ಉಣಕಲ್ ಉದ್ಯಾನ, ಕಿಮ್್ಸ ಹಿಂಭಾಗ, ಕೇಶ್ವಾಪುರ ಬೆಂಗೇರಿ ಸಂತೆ ಮೈದಾನ, ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ, ಸೋನಿಯಾ ಗಾಂಧಿ ನಗರ, ಎಸ್.ಎಂ. ಕೃಷ್ಣಾನಗರ ಹಾಗೂ ಪಿ.ಬಿ. ರಸ್ತೆ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ಇಂದಿರಾ ಕ್ಯಾಂಟೀನ್ಗಳಿವೆ. ಆದಿತ್ಯ ಮಯೂರ ರೆಸಾರ್ಟ್ನವರು ಆಹಾರ ಪೂರೈಕೆಯ ಗುತ್ತಿಗೆ ಹಿಡಿದಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ಗಳ ಮೂಲಕ ಉಚಿತವಾಗಿ ಉಪಾಹಾರ ಮತ್ತು ಊಟ ಪೂರೈಸಲಾಗುತ್ತಿದೆ. ಇಲ್ಲಿ ನಿತ್ಯ ಆಹಾರ ಸೇವಿಸುವ ಜನರ ಸಂಖ್ಯೆಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಸರ್ಕಾರದ ಸೂಚನೆ ಇದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು ಹಾಗೂ ಪರಿಸರ ಇಂಜಿನಿಯರ್ಗಳು ಪ್ರತಿದಿನ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
– ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತರು