ಪಡನೂರದಲ್ಲಿ ರೈಲು ನಿಲ್ಲುಗಡೆ ಆಗ್ರಹ

indi 14-2

ಇಂಡಿ: ತಾಲೂಕಿನ ಪಡನೂರ ಗ್ರಾಮದ ಬಳಿಯ ರೈಲು ನಿಲ್ದಾಣದಲ್ಲಿ ಸೊಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ನಿತ್ಯ ನಿಲುಗಡೆ ಪುನರಾರಂಭ ಮಾಡಬೇಕೆಂದು ಈ ಭಾಗದ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ದಿನ ನಿತ್ಯ ಸೊಲ್ಲಾಪುರದಿಂದ ಹುಬ್ಬಳ್ಳಿಗೆ ಬೆಳಗ್ಗೆ 5.32ಕ್ಕೆ ಸಂಚರಿಸುವ ಪ್ಯಾಸೆಂಜರ್ ರೈಲು ನಿತ್ಯ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲುತ್ತಿತ್ತು. ಅಲ್ಲದೆ, ಹುಬ್ಬಳ್ಳಿಯಿಂದ ಸೊಲ್ಲಾಪುರಕ್ಕೆ ತೆರಳುತ್ತಿದ್ದ ರೈಲೂ ಸಹ ರಾತ್ರಿ 9.50ಕ್ಕೆ 1 ನಿಮಿಷ ನಿಲುಗಡೆಯಗುತ್ತಿತ್ತು. ಇದರಿಂದ ಗ್ರಾಮ ಸೇರಿ ಸುತ್ತಮುತ್ತಲಿನವರಿಗೆ ಅನುಕೂಲವಾಗಿತ್ತು. ನೌಕರರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು ನಿತ್ಯ ಇಲ್ಲಿನ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದು ದೂರದ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರು. ಆದರೆ ವಾರದಿಂದ ಈ ಎರಡೂ ರೈಲುಗಳ ನಿಲುಗಡೆಯನ್ನು ಸಂಬಂಧಿಸಿದ ರೈಲು ಇಲಾಖೆ ರದ್ದು ಪಡಿಸಿದ್ದು ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಉಳಿದ ಹೈದರಾಬಾದ್, ರಾಯಚೂರು ಪ್ಯಾಸೆಂಜರ್, ಡೆಮೊ ಸೇರಿ ಎಲ್ಲ ಪ್ಯಾಸೆಂಜರ್ ರೈಲುಗಳು ನಿತ್ಯ ನಿಲ್ಲುತ್ತವೆ. ಆದರೆ, ಸೊಲ್ಹಾಪುರ- ಹುಬ್ಬಳ್ಳಿ ರೈಲು ನಿಲುಗಡೆಯಾಗದಿರುವುದು ಇಲ್ಲಿನ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಸ್ಥಳೀಯ ನಿವಾಸಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೂ ಪ್ರಯಾಣಿಕರು ಮನವಿ ಸಲ್ಲಿಸಿದ್ದಾರೆ.
ಕೂಡಲೇ ಸಂಬಂಧಿಸಿದ ರೈಲು ಇಲಾಖೆಯವರು ಎಂದಿನಂದತೆ ಹುಬ್ಬಳ್ಳಿ- ಸೊಲ್ಲಾಪುರ ಮತ್ತು ಸೊಲ್ಲಾಪುರ-ಹುಬ್ಬಳ್ಳಿ ರೈಲುಗಳನ್ನು ಗ್ರಾಮದ ನಿಲ್ದಾಣದಲ್ಲಿ ನಿಲ್ಲಗಡೆ ಮಾಡಲು ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ ಎಂಬುದು ಪಡನೂರ ಗ್ರಾಮದ ತಾಪಂ ಮಾಜಿ ಸದಸ್ಯ ಕಲ್ಲನಗೌಡ ಬಿರಾದಾ, ಪಂಚಪ್ಪ ಅರವತ್ತು, ಸ್ಥಳೀಯ ಗ್ರಾಪಂ ಸದಸ್ಯ ಗೇಣು ಗಿರಣಿವಡ್ಡರ, ನಿವೃತ್ತ ಶಿಕ್ಷಕ ಸಂಗಣ್ಣ ಭೈರಜಿ ಮತ್ತಿರರ ಆಶಯವಾಗಿದೆ.

blank
Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank