ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದ ಪ್ರಶಸ್ತಿ ಇದು. ಈ ಪುರಸ್ಕಾರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ್ದು, ಮಕ್ಕಳು, ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಪ್ರತಿವರ್ಷ ಗುರುತಿಸಿ ಗೌರವಿಸಲಾಗುತ್ತದೆ. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರದಲ್ಲಿ ಎರಡು ಕೆಟಗರಿಗಳು – ಬಾಲ ಶಕ್ತಿ ಪುರಸ್ಕಾರ ಮತ್ತು ಬಾಲ ಕಲ್ಯಾಣ ಪುರಸ್ಕಾರ.
ಬಾಲ ಶಕ್ತಿ ಪುರಸ್ಕಾರವನ್ನು ನವೋನ್ವೇಷಣೆ, ಅಧ್ಯಯನ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಮಾಜ ಸೇವೆ, ಶೌರ್ಯದಲ್ಲಿ ಅಪ್ರತಿಮ ಸಾಧನೆ ತೋರಿದ ಮಕ್ಕಳಿಗೆ ಕೊಡಲಾಗುತ್ತದೆ. ಬಾಲ ಕಲ್ಯಾಣ ಪುರಸ್ಕಾರವನ್ನು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ, ಮಕ್ಕಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರತಿವರ್ಷ ಈ ಪುರಸ್ಕಾರವನ್ನು ಗಣರಾಜ್ಯೋತ್ಸವ ದಿನಕ್ಕಿಂತ ಮುಂಚಿತವಾಗಿ ಒಂದು ವಾರದೊಳಗೆ ಪ್ರದಾನ ಮಾಡಲಾಗುತ್ತದೆ.
Delhi: President Ram Nath Kovind presents Pradhan Mantri Rashtriya Bal Puraskar, 2020 (National Bravery Award) at Rashtrapati Bhavan. 22 children – 10 girls and 12 boys are receiving the award this year. pic.twitter.com/mDAjdlC2JR
— ANI (@ANI) January 22, 2020