ದಾವಣಗೆರೆ: ಕಾಂತರಾಜ್ ಆಯೋಗ ನೀಡಿದ ಜಾತಿ ವರದಿ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಅಹಿಂದ ಹಾಗೂ ಶೋಷಿತ ಸಮುದಾಯಗಳು ಬೆಂಬಲವಾಗಿ ನಿಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಹೇಳಿದರು.
ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆ ಹಾಗೂ ಅನುಷ್ಠಾನಕ್ಕಾಗಿ ಆಗ್ರಹಿಸಿ ದಾವಣಗೆರೆ ಜಿಲ್ಲಾ ಅಹಿಂದ ಹಾಗೂ ಶೋಷಿತ ವರ್ಗಗಳು ಇಲ್ಲಿನ ಹೊರವಲಯದ ಸಮೃದ್ಧಿ ಕನ್ವೆನ್ಷನ್ ಹಾಲ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ವರದಿ ಜಾರಿಗೆ ದಾವಣಗೆರೆ ಜಿಲ್ಲೆಯಿಂದಲೇ ಸಂಘಟನಾತ್ಮಕ ಚಾಲನೆ ನೀಡಲು ಈ ಸಭೆ ನಡೆಸಲಾಗುತ್ತಿದೆ. ಇದು ನಮ್ಮ ಹಕ್ಕೊತ್ತಾಯದ ಹೋರಾಟವೇ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಶೋಷಿತ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಸಮೀಕ್ಷಾ ವರದಿ ಬಿಡುಗಡೆ ಮತ್ತು ಅನುಷ್ಠಾನಕ್ಕೆ ಎಲ್ಲ ಹಿಂದುಳಿದ ಸಮಾಜದವರು ಒಗ್ಗೂಡಿ ಹೋರಾಟ ಮಾಡುವ ಅನಿವಾರ್ಯತೆ ಇದೆ.
ಜಿಲ್ಲೆಯಲ್ಲಿ ಅಹಿಂದ, ಶೋಷಿತ ಸಮುದಾಯ ಹೆಚ್ಚು ಇದ್ದಾಗ್ಯೂ ನಮ್ಮಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಅರಿವು ಕಡಿಮೆಯಾಗಿದೆ. ಆದ್ದರಿಂದ ಸಂಘಟಿತರಾಗುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ರಾಜ್ಯ ಸರ್ಕಾರ ಸರ್ಕಾರಿ ನೌಕರ ವರ್ಗದಿಂದಲೇ ಜಾತಿಗಣತಿ ಮಾಡಿಸಿದೆ. ಹೀಗಿರುವಾಗ ಅದು ಅವೈಜ್ಘಾನಿಕವಾಗಲು ಸಾಧ್ಯವಿಲ್ಲ. ನಿಮ್ಮ ಬಂಡವಾಳ ಬಯಲಾಗಲಿದೆ ಎಂಬ ಕಾರಣಕ್ಕೆ ವಿರೋಧಿಗಳಿಗೆ ಭಯ ಕಾಡುತ್ತಿದೆ ಎಂದು ತಿಳಿಸಿದರು.
ಕಾಂತರಾಜ್ ವರದಿ ಬಿಡುಗಡೆಗೆ ಜನಾಂದೋಲನವಾಗಿ ಚಳವಳಿ ರೂಪದಲ್ಲಿ ನಾವು ಸಂಘಟಿತರಾಗಬೇಕು. ಸಿದ್ದರಾಮಯ್ಯ ಅವರಿಗೆ ನಾವು ಶಕ್ತಿ ಕೊಡಬೇಕಿದೆ. ಇಲ್ಲವಾದಲ್ಲಿ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತಾಗಲಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ ದುಡಿವ ವರ್ಗಗಳು ಹಸಿವಿನಿಂದ ಸಾಯುತ್ತಿವೆ. ದುಡಿಯಲಾರದ ವರ್ಗಗಳು ಸುಳ್ಳು ಹೇಳಿಕೊಂಡು ನಮ್ಮನ್ನು ಆಳುತ್ತಿವೆ. ನಮ್ಮಲ್ಲಿರುವ ಮೌಢ್ಯದ ಬೇರುಗಳನ್ನು ಕಿತ್ತುಹಾಕಬೇಕಿದೆ ಎಂದು ಹೇಳಿದರು.
ಮನುವಾದಿಗಳು ಪುರಾಣದ ಪರಿಕಲ್ಪನೆಗಳನ್ನು ಪೋಷಣೆ ಮಾಡುತ್ತಿದ್ದಾರೆ. ನಾವು ಅಂಬೇಡ್ಕರ್, ಬಸವಣ್ಣ. ಗಾಂಧೀಜಿ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡಿಲ್ಲ ಹಾಗಾಗಿ ಮನುವಾದಿಗಳು ನಮ್ಮನ್ನು ಆಳುತ್ತಿದ್ದಾರೆ. ನಮಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ನಮ್ಮ ಸಾಂಸ್ಕೃತಿಕ ನಾಯಕ ಅಂಬೇಡ್ಕರ್ ಅವರ ಆದರ್ಶಗಳು ಅವಶ್ಯಕವಾಗಿ ಪರಿಪಾಲನೆ ಆಗಬೇಕಿದೆ. ಅಲಕ್ಷಿತ ಸಮುದಾಯಗಳು ಒಂದಾದರೆ ಕೋಮುವಾದ ನಾಶ ಮಾಡಬಹುದು ಎಂದು ಹೇಳಿದರು.
ಪ್ರಾಧ್ಯಾಪಕ ದಾದಾಪೀರ್ ನವಿಲೇಹಾಳ್ ಮಾತನಾಡಿ ದಿವಂಗತ ದೇವರಾಜ್ ಅರಸು ಎದುರಿಸಿದ ಸಾಮಾಜಿಕ ಸವಾಲುಳೇ ಇದೀಗ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲೂ ಎದುರಾಗಿವೆ. ಅದಕ್ಕೆ ನಾವು ಎದೆಗುಂದದೆ ಭರವಸೆಗಳನ್ನು ಹುಟ್ಟಿಸಿ ಬೆಂಬಲಿಸುವ ಅನಿವಾರ್ಯತೆಯಾಗಿದೆ ಎಂದರು.
ಕಾಂತರಾಜ್ ವರದಿ ಜಾರಿಗೆ ಆಡಳಿತ ಪಕ್ಷದ ಸಂಪುಟದವಲ್ಲೇ ವಿರೋಧವಿದೆ. ವರದಿಯಿಂದ ಹಿಂದುಳಿದವರಿಗೆ ಹೆಚ್ಚು ಲಾಭವಾಗಬಹುದೆಂಬ ಕಲ್ಪನೆ ಸರಿಯಲ್ಲ. ಜಾತಿ ಗಣತಿ ಅನುಷ್ಠಾನ ಆಗಲೆಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಎಸ್ಪಿ ಎನ್. ರುದ್ರಮುನಿ ಮಾತನಾಡಿ ಕಾಂತರಾಜ್ ವರದಿ ವಿರೋದಿಗಳನ್ನು ಸಮಯ ಬಂದಾಗ ವಿರೋಧಿಸೋಣ. ಸಮುದಾಯಗಳನ್ನು ಜಾಗೃತಿ ಮಾಡೋಣ ವೆಂದರು.
ಮಲ್ಲಿಕಾರ್ಜುನ್ ಹಲಸಂಗಿ. ಮಾತನಾಡಿ ನಮ್ಮಗೆ ರಾಜಕೀಯ ಸಮಾಜಿಕ ಪರಿಕಲ್ಪನೆಗಳಿಂದ ದೂರಸರಿದು ಬಿಟ್ಟಿದ್ದೆವೆ ಬೇರೆಯವರಿಗೆ ದಾರೆ ಎರೆಯುತ್ತಿದ್ದೆವೆ.ಇದನ್ನು ಬಿಟ್ಟು ಎಲ್ಲಾ ರಂಗಗಳಲ್ಲೂ ಸಬಲರಾದಾರೆ ಮಾತ್ರ ನಾವುಯಶಸ್ಸುಕಾಣಲು ಸಾಧ್ಯವಿದೆ.ಎಂದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ, ಹಾಗೂ ಹೊನ್ನಾಳಿ ಸಿದ್ದಪ್ಪ ಮಾತನಾಡಿ ಕಾಂತರಾಜ್ ವರದಿಯಿಂದ ಮುಂದುವರೆದ ಸಮುದಾಯಗಳಿಗೆ ಆತಂಕವಿರಬಹುದು. ವೈಜ್ಞಾನಿಕವಾಗಿ ನಡೆದಿರುವ ಕಾಂತರಾಜ್ ವರದಿ ಬಿಡುಗಡೆಗೆ ಒತ್ತಡ ತರೋಣ ಎಂದರು.
ಕೆ.ಪಿ.ಸಿ.ಸಿ ಸದಸ್ಯ ಕೆ.ಎಸ್.ವಿಜಯ್ ಕುಮಾರ್ ರ್ ಸೇರಿದ್ದಂತೆ ಜಿಲ್ಲೆಯ ಅಹಿಂದ ಮತ್ತು ಶೋಷಿತ ಸಮುದಾಯಗಳ ಅಧ್ಯಕ್ಷರುಗಳು ಮಾತನಾಡಿ ವರದಿ ಬಿಡುಗಡೆ ಅನುಷ್ಠಾನಕ್ಕೆ ಒತ್ತಾಯಮಾಡಿದರು.
ಸಭೆಯಲ್ಲಿ ನಿವೃತ್ತ ಎಸ್ಪಿ ರವಿನಾರಾಯಣ್, ಇಮ್ತಿಯಾಜ್, ಮರಿಯೋಜಿರಾವ್, ಗುಬ್ಬಿಬಸವರಾಜ್.ಹಬಿಬ್, ರಂಗಸ್ವಾಮಿ. ಸನಾವುಲ್ಲಾ, ರಾಜಶೇಖರ್, ಮೌನೇಶಾಚಾರ್. ವಕೀಲರಾದ ಅನಿಸ್ ಪಾಷಾ, ವೀರೇಶ ನಾಯ್ಕ್ ಯಲ್ಲಪ್ಪ. ಬಿ.ತಿಪ್ಪಣ್ಣ ಕತ್ತಗೆರೆ.ಮಹಮ್ಮದ್ ಶಿರಾಜ್ಶೇಕ್, ಎಂ.ಟಿ. ಸುಭಾಶ್ಚಂದ್ರ. ಘನಿತಾಹಿರ್, ದೀಟೂರು ಚಂದ್ರು, ಸಿದ್ದಲಿಂಗಪ್ಪ ಪರಮೇಶ್, ನಲ್ಕುಂದ ಹಾಲೇಶ್. ಇಟ್ಟಿಗುಡಿ ಮಂಜುನಾಥ್, ಬಿ,ಎಂ.ನಿರಂಜನ್, ಎಚ್,.ಕೆ. ವೀರಣ್ಣ, ವಕೀಲರಾದ ಹುಚ್ಚ್ಚೆಂಗಪ್ಪ, ಫಿರೋಜ್ಖಾನ್, ಬಾಗೂರು ಆನಂದಪ್ಪ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಹೋರಾಟದ ಭಾಗವಾಗಿ 13 ಜನರನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚಿಸಲಾಯಿತು. ಇನ್ನೊಂದು ವಾರದಲ್ಲಿ ಉಳಿದ ತಾಲೂಕುಗಳಲ್ಲಿ ಸಮನ್ವಯ ಸಮಿತಿ ರಚಿಸಿ ಮುಂದಿನ ಹಂತದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು ಸಭೆ ಸಮ್ಮತಿಸಿತು.
ಕಾಂತರಾಜ್ ವರದಿ ಜಾರಿಗೆ ಜನಾಂದೋಲನ

ಜಸ್ಟ್ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin
Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…
ಸಾಧನೆ ಸಂಭ್ರಮಿಸೋಣ ಸೇವೆಗೆ ಅಣಿಯಾಗೋಣ
ಮೊನ್ನೆಯಷ್ಟೇ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಬಂದಿತು. ಈ ಫಲಿತಾಂಶ ತಂದ ಸಂತಸ ಮತ್ತು ಸಂದೇಶ…
ಅನಾನಸ್ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips
Health Tips : ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಆಕರ್ಷಕ ಹಳದಿ ಹಣ್ಣಾದ ಅನಾನಸ್,…