ಮಕ್ಕಳ ಆಸಕ್ತಿಯ ಶಿಕ್ಷಣ ಇಂದಿನ ಅಗತ್ಯ  

blank

ದಾವಣಗೆರೆ : ಪ್ರಸ್ತುತ ಪಾಲಕರ ಇಚ್ಛೆಯಂತೆ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗುತ್ತಿದೆ, ಆದರೆ ಮಕ್ಕಳ ಆಸಕ್ತಿಯನ್ನು ಅರಿತು ಅವರಿಗೆ ಬೇಕಾದ ವಿದ್ಯೆಯನ್ನು ನೀಡಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆಶ್ರಯದಲ್ಲಿ ದಾವಣಗೆರೆ ಉತ್ತರ ವಲಯದ ಬಸಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  ನಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬುದು ಪಾಲಕರ ಒತ್ತಾಸೆ ಆಗಿರುತ್ತದೆ. ಇದರಿಂದ ಮಕ್ಕಳ ಪೂರ್ಣ ವಿಕಾಸ ಆಗುವುದಿಲ್ಲ. ಅವರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.  ನಮಗೆ ಆದರ್ಶಗಳು, ಒಳ್ಳೆಯ ಗುಣಗಳು ತಂದೆ ತಾಯಿ, ಪರಿಸರ ಮತ್ತು ಆದರ್ಶ ವ್ಯಕ್ತಿತ್ವಗಳನ್ನು ಅನುಕರಿಸುವುದರಿಂದ ಬರುತ್ತವೆ. ಹಾಗಾಗಿ ಸಮಾಜದಲ್ಲಿ ಆಗಿ ಹೋಗಿರುವ ಸ್ವಾಮಿ ವಿವೇಕಾನಂದ ಅಂತಹವರನ್ನು ಮಾದರಿಯಾಗಿ ಸ್ವೀಕರಿಸಬೇಕು. ಸಿನಿಮಾ ನಟರು ಮತ್ತು ಕ್ರಿಕೆಟ್ ಆಟಗಾರರನ್ನಲ್ಲ ಎಂದು ಹೇಳಿದರು.  ಲೇಖಕ ಬಾ.ಮ. ಬಸವರಾಜಯ್ಯ ಮಾತನಾಡಿ, ಒಂದು ಶಾಲಾ ವಾತಾವರಣ ಹೇಗಿರಬೇಕು ಎನ್ನುವುದಕ್ಕೆ ಬಸಾಪುರದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಮಾದರಿಯಾಗಿವೆ. ಇಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕ ವರ್ಗ ಒಟ್ಟಾಗಿ ಕಾರ್ಯ ನಿರ್ವಹಿಸುವುದರಿಂದ ಜನಪ್ರತಿನಿಧಿಗಳ ನೆರವು ಪಡೆದು ಶಾಲೆಯನ್ನು ಸುಸಜ್ಜಿತಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಜಿಲ್ಲೆಯ ಬೇರೆ ತಾಲೂಕಿನಿಂದ ಬಂದಿರುವ ಶಿಕ್ಷಕರು ಮನಸ್ಸು ಮಾಡಿದರೆ ಈ ಕೆಲಸವನ್ನು ತಾವು ಕಾರ್ಯ ನಿರ್ವಹಿಸುವಲ್ಲೂ ಮಾಡಬಹುದು. ಮನಸಿದ್ದರೆ ಮಾರ್ಗ ಎಂದು ಅಭಿಪ್ರಾಯಪಟ್ಟರು.  ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಕೊಟ್ರೇಶ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ್ಪಲತಾ, ಮಹಾನಗರ ಪಾಲಿಕೆ ಸದಸ್ಯೆ ಶಿವಲೀಲಾ ಕೊಟ್ರಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮೇಶ್, ಗುರುಸ್ವಾಮಿ, ಗ್ರಾಮದ ಪ್ರಮುಖರಾದ ಬಿ. ನಾಗೇಂದ್ರಚಾರ್, ಕೆ.ಬಿ. ಲಿಂಗರಾಜು, ಎಂ.ಎಸ್. ಕೊಟ್ರಯ್ಯ, ಸಿ. ಮಹೇಶ್ವರಪ್ಪ, ಹರೀಶ್ ಬಸಾಪುರ, ಜಿ. ತಿಪ್ಪೇಸ್ವಾಮಿ, ಬಿ.ಎಂ. ಬಕ್ಕಯ್ಯ, ಬಿ.ಕೆ. ದೇವೇಂದ್ರಪ್ಪ, ಆಲದಹಳ್ಳಿ ಗಿರೀಶ್, ಕಳೂರು ಮಹೇಶ್ವರಪ್ಪ, ಕಳೂರು ಪರಮೇಶ್ವರಪ್ಪ ಇದ್ದರು.  …  (ಬಾಕ್ಸ್)  ಕಲೆಯ ಅನಾವರಣ  ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ಹಾಡು, ನೃತ್ಯ, ಬರವಣಿಗೆ ಹೀಗೆ ವಿವಿಧ ವಿಭಾಗಗಳಲ್ಲಿ ಪ್ರತಿಭೆ ಮೆರೆದರು.  ಕಂಠಪಾಠ, ಧಾರ್ಮಿಕ ಪಠಣ, ದೇಶಭಕ್ತಿ ಗೀತೆ, ಪ್ರಬಂಧ ರಚನೆ, ಕಥೆ ಹೇಳುವುದು, ಚಿತ್ರಕಲೆ, ಅಭಿನಯ ಗೀತೆ, ಕ್ಲೇ ಮಾಡೆಲಿಂಗ್, ಭಕ್ತಿಗೀತೆ, ಆಶುಭಾಷಣ, ಕವನ ವಾಚನ, ಮಿಮಿಕ್ರಿ, ರಂಗೋಲಿ, ಗಜಲ್, ಭರತನಾಟ್ಯ, ಭಾವಗೀತೆ, ಹೀಗೆ 14 ವೈಯಕ್ತಿಕ ಸ್ಪರ್ಧೆಗಳು ನಡೆದವು. ಜಾನಪದ ನೃತ್ಯ, ಕ್ವಿಜ್, ಕವ್ವಾಲಿ ಸಮೂಹಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

blank
Share This Article

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…