More

    ದಾವಣಗೆರೆ ಜಿಲ್ಲೆಯಲ್ಲಿ ಮಳೆಯಿಂದ 76 ಎಕರೆ ಬೆಳೆ ಹಾನಿ

    ದಾವಣಗೆರೆ : ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ 76 ಎಕರೆಯಷ್ಟು ಭತ್ತ, ಅಡಕೆ, ಬಾಳೆ ಇನ್ನಿತರ ಬೆಳೆ ಹಾನಿಯಾಗಿದ್ದು ಲಕ್ಷಾಂತರ ರೂ.ಗಳ ನಷ್ಟವಾಗಿದೆ.
     ದಾವಣಗೆರೆ ತಾಲೂಕು ಕೊಡಗನೂರು ಗ್ರಾಮದಲ್ಲಿ 3 ಎಕರೆ, ಜರೀಕಟ್ಟೆಯಲ್ಲಿ 2.15 ಎಕರೆ ಸೇರಿ ಒಟ್ಟು 5.15 ಎಕರೆ ಅಡಕೆ ಬೆಳೆ ಹಾನಿಯಾಗಿದೆ.
     ಹರಿಹರ ತಾಲೂಕು ಇಂಗಳಗೊಂದಿ ಮತ್ತು ಧೂಳೆಹೊಳೆ ಗ್ರಾಮಗಳಲ್ಲಿ 30 ಎಕರೆ ಭತ್ತದ ಬೆಳೆಗೆ ಹಾನಿಯಾಗಿದ್ದು 1.80 ಲಕ್ಷ ರೂ. ನಷ್ಟ ಸಂಭವಿಸಿದೆ.
     ಜಗಳೂರು ತಾಲೂಕಿನಲ್ಲಿ 2 ಕಚ್ಚಾ ಮನೆಗೆ ಹಾನುಯಾಗಿದ್ದು 15 ಎಕರೆ ಬಾಳೆ, 5 ಎಕರೆ ಅಡಕೆ ಬೆಳೆಗೆ ಹಾನಿಯಾಗಿದ್ದು 6 ಲಕ್ಷ ರೂ. ನಷ್ಟವಾಗಿದೆ.
     ಹೊನ್ನಾಳಿ ತಾಲೂಕಿನಲ್ಲಿ 20 ಎಕರೆ ಭತ್ತದ ಬೆಳೆಗೆ ಹಾನಿಯಾಗಿದ್ದು 2 ಲಕ್ಷ ರೂ. ನಷ್ಟ ಸಂಭವಿಸಿದೆ. ಚನ್ನಗಿರಿ ತಾಲೂಕಿನಲ್ಲಿ 1 ಎಕರೆ ಬಾಳೆ ಬೆಳೆಗೆ ಹಾನಿಯಾಗಿದೆ.
     ಜಿಲ್ಲೆಯಲ್ಲಿ 5.9 ಮಿ.ಮೀ. ಮಳೆಯಾಗಿದೆ. ಚನ್ನಗಿರಿ 0.7 ಮಿ.ಮೀ, ದಾವಣಗೆರೆ 3 ಮಿ.ಮೀ, ಹರಿಹರ 14.5 ಮಿ.ಮೀ, ಹೊನ್ನಾಳಿ 13.1 ಮಿ.ಮೀ, ಜಗಳೂರು 5.1 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 12.1 ಮಿ.ಮೀ. ಮಳೆಯಾಗಿದೆ.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts