ಅಗತ್ಯ ಮೀರಿದ ಸಂಗ್ರಹವೂ ಪರಿಸರಕ್ಕೆ ಹಾನಿ

blank

ದಾವಣಗೆರೆ : ಅಗತ್ಯಕ್ಕೆ ಮೀರಿದ ಸಂಗ್ರಹವೂ ಪರಿಸರಕ್ಕೆ ಅಪಾಯಕಾರಿ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮಿಕಾಂತ ಹೇಳಿದರು.
 ದಾವಣಗೆರೆ ವಿಶ್ವವಿದ್ಯಾನಿgಲಯ ಎನ್‌ಎಸ್‌ಎಸ್ ಘಟಕಗಳು, ಪರಿಸರ ವಿಜ್ಞಾನ ವಿಭಾಗ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
 ಸುಲಭದ ಉತ್ಪಾದನೆ, ಕಡಿಮೆ ಅಥವಾ ರಿಯಾಯಿತಿ ದರದ ಮಾರಾಟದ ಹೆಸರಿನಲ್ಲಿ ನಡೆಯುವ ಮಾರುಕಟ್ಟೆ ಪ್ರಭಾವವೂ ಮನುಷ್ಯನ ಅಗತ್ಯಕ್ಕೆ ಮೀರಿದ ಖರೀದಿಗೆ ಪ್ರಚೋದನೆ ನೀಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ ಎಂದು ತಿಳಿಸಿದರು.
 ಹೋಟೆಲ್‌ನಿಂದ ತರುವ ಪ್ಯಾಕೇಜ್ ಆಹಾರದ ಜತೆಗೆ ನಾವು ಕಸವನ್ನೂ ತರುತ್ತಿದ್ದೇವೆ. ಆಹಾರವನ್ನು ಪ್ಯಾಕ್ ಮಾಡುವ ಪ್ಲಾಸ್ಟಿಕ್, ಕಾಗದ ಹಾಗೂ ಇನ್ನಿತರ ವಸ್ತುಗಳ ಉತ್ಪಾದನೆಯು ಮಾಲಿನ್ಯದ ಅಡಿಪಾಯ. ಅನಗತ್ಯ ಉತ್ಪಾದನೆಗೆ ನಿಯಂತ್ರಣ ಹೇರಿದರೆ ಪರಿಸರದ ಮೇಲಿನ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು.
 ಪರಿಸರ ಜಾಗೃತಿ ಬಗ್ಗೆ ಪ್ರತಿದಿನವೂ ಬೋಧನೆ ಮಾಡಲು, ಪಾಠ ಹೇಳಲು ಅಥವಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪರಿಸರ ಜಾಗೃತಿಗಾಗಿ ಒಂದು ದಿನ ನಿಗದಿಪಡಿಸಿ, ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲರೂ ಗಿಡ ನೆಟ್ಟು, ಪೋಷಿಸಿ ಬೆಳೆಸುವ ಜವಾಬ್ದಾರಿ ಪಾಲಿಸಬೇಕು ಎಂದು ಹೇಳಿದರು.
 ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಎ.ಎಂ. ರೇಣುಕಾರಾಧ್ಯ ಮಾತನಾಡಿ, ಮಣ್ಣು, ನೀರು, ಗಾಳಿಯ ಮಾಲಿನ್ಯದಂತೆ ಇತ್ತೀಚೆಗೆ ಹೊಸ ಹೊಸ ಮಾಲಿನ್ಯಗಳು ಸೃಷ್ಟಿಯಾಗುತ್ತಿವೆ. ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯಗಳೂ ಪರಿಸರ ನಾಶ ಮಾಡುವ ಜತೆಗೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಮುಂಜಾಗೃತೆ ವಹಿಸಿ ನಿಯಂತ್ರಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ತಿಳಿಸಿದರು.
 ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡಿ, ಪ್ಲಾಸ್ಟಿಕ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಆದರೆ, ಉತ್ಪಾದನೆ ನಿಲ್ಲಿಸಲು ಸರ್ಕಾರಗಳಿಂದಾಗಲಿ, ಸಂಬಂಧಿಸಿದ ಇಲಾಖೆಗಳಿಂದಲೂ ಸಾಧ್ಯವಾಗಿಲ್ಲ. ಪ್ಲಾಸ್ಟಿಕ್‌ನಿಂದಾಗಿ ಇಡೀ ಜಗತ್ತು ಪರಿಸರದ ಅಸಮತೋಲನ ಎದುರಿಸುತ್ತಿದೆ. ಪ್ರಕೃತಿ ವಿಕೋಪಕ್ಕೆ ಮನುಷ್ಯನೇ ಬಲಿಯಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
 ಮಾಲಿನ್ಯ ಸೇರಿದಂತೆ ಇನ್ನಿತರ ಯಾವುದೇ ರೀತಿ ಪರಿಸರವನ್ನು ಹಾನಿಗೀಡು ಮಾಡುವವರ ವಿರುದ್ಧ ಸರ್ಕಾರ ಮತ್ತು ಪರಿಸರ ಇಲಾಖೆಗಳು ಕಠಿಣ ಕಾನೂನು ಕ್ರಮ ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಗತ್ಯ. ಇಲ್ಲವಾದರೆ ಪರಿಸರ ಸಂಪೂರ್ಣ ನಾಶವಾಗಿ ಮನುಕುಲವು ಸಂಕಷ್ಟಕ್ಕೀಡಾಗುವುದನ್ನು ಯಾರಿದಂಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
 ಕುಲಸಚಿವ ಪ್ರೊ.ಯು.ಎಸ್. ಮಹಾಬಲೇಶ್ವರ, ಹಣಕಾಸು ಅಧಿಕಾರಿ ಮುದ್ದನಗೌಡ ದ್ಯಾಮನಗೌಡ್ರ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಪಾಳೇದ, ಪರಿಸರ ವಿಜ್ಞಾನ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಎನ್.ಎಸ್. ಪ್ರಮೋದ ಇದ್ದರು.
 ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜೆ. ವೀರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸೌಮ್ಯಾ ಎಸ್. ಬುಳ್ಳಾ ಸ್ವಾಗತಿಸಿದರು. ಡಾ.ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು.

Share This Article

ಮನೆಯಲ್ಲಿ ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ, ಅದೃಷ್ಟ ಖಂಡಿತವಾಗಿಯೂ ಒಲಿದು ಬರುತ್ತದೆ ಮತ್ತು ನೀವು ಶ್ರೀಮಂತರಾಗುತ್ತೀರಿ! mirror

mirror : ವಾಸ್ತು ಪ್ರಕಾರ, ನಮ್ಮ ಮನೆಗಳಲ್ಲಿರುವ ಕೆಲವು ರೀತಿಯ ವಸ್ತುಗಳು ನಾವು ಎದುರಿಸುತ್ತಿರುವ ಆರ್ಥಿಕ…

ಬೆಳಿಗ್ಗೆ ಎದ್ದಾಗ ಇವುಗಳನ್ನು ನೋಡಬೇಡಿ! ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ… Morning

Morning: ಬೆಳಿಗ್ಗೆ ಎದ್ದ ನಂತರ ಕೆಲವು ವಸ್ತುಗಳನ್ನು ನೋಡಿದರೆ, ಅದು ಇಡೀ ದಿನ ಅಶುಭಕರವಾಗಿರುತ್ತದೆ ಎಂದು…

ಖಾಲಿ ಹೊಟ್ಟೆಯಲ್ಲಿ ಒಂದು ಚಿಟಿಕೆ ಶುಂಠಿ ತಿಂದು, ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Ginger

Ginger: ಅಡುಗೆಯ ರುಚಿ ಹೆಚ್ಚಿಸಲು ನಾವು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ, ಅವುಗಳಲ್ಲಿ ಶುಂಠಿಯೂ…