More

    ಸೌಹಾರ್ದ ಬದುಕಿಗಾಗಿ ದಸರಾ ಧರ್ಮ ಸಮ್ಮೇಳನ

    ಲಿಂಗಸುಗೂರು: ಶರನ್ನವರಾತ್ರಿ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ 32 ನೇ ದಸರಾ ಧರ್ಮ ಸಮ್ಮೇಳನವನ್ನು ಪಟ್ಟಣದಲ್ಲಿ ಆಯೋಜಿಸಲಾಗಿದೆ. ಲೋಕ ಕಲ್ಯಾಣ ಮತ್ತು ಧರ್ಮ ಜಾಗೃತಿಗಾಗಿ ಈ ಸಮ್ಮೇಳನ ನಡೆಯಲಿದೆ ಎಂದು ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಧರ್ಮ ಸಮ್ಮೇಳನದ ವೇದಿಕೆ ನಿರ್ಮಾಣ ಕಾಮಗಾರಿ ಚಾಲನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಂಗಳವಾರ ಮಾತನಾಡಿದರು. ಜನರಲ್ಲಿನ ದಶ ದುರ್ಗುಗಣಗಳನ್ನು ದೂರ ಮಾಡಿ ಧರ್ಮ ಮಾರ್ಗದಲ್ಲಿ ಸೌಹಾರ್ದಯುತ ಬದುಕು ಸಾಗಿಸಲು ದಸರಾ ಧರ್ಮ ಸಮ್ಮೇಳನವನ್ನು ರಂಭಾಪುರಿ ಪೀಠದಿಂದ ಆಯೋಜಿಸಲಾಗುತ್ತಿದೆ ಎಂದರು.

    ಸಮ್ಮೇಳನಕ್ಕೆ ಪಂಚಪೀಠಗಳ ಭಕ್ತರು ಆಗಮಿಸಲಿದ್ದು, ಪ್ರತಿದಿನ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಸಂಜೆ ಧರ್ಮ ಸಮ್ಮೇಳನ ನಡೆಯಲಿದ್ದು, ನಾನಾ ಮಠಾಧೀಶರು, ಮುಖ್ಯಮಂತ್ರಿ ಹಾಗೂ ಇತರ ಚುನಾಯಿತ ಪ್ರತಿನಿಧಿಗಳು, ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ಗುರುಗಜದಂಡ ಶಿವಾಚಾರ್ಯರು ಹೇಳಿದರು.

    ಪ್ರಮುಖರಾದ ಭೂಪನಗೌಡ ಪಾಟೀಲ್, ಪಾಮಯ್ಯ ಮುರಾರಿ, ಸೋಮಶೇಖರ ಐದನಾಳ, ಗಿರಿಮಲ್ಲನಗೌಡ ಪಾಟೀಲ್, ಮಹಾದೇವಯ್ಯ ಗೌಡೂರು, ಪ್ರಭುಸ್ವಾಮಿ ಅತ್ತನೂರು, ಜಂಬಯ್ಯಸ್ವಾಮಿ, ಮಹೇಶ ನಂದಿಕೋಲಮಠ, ಅಯ್ಯಪ್ಪ ವಕೀಲ, ವೆಂಕನಗೌಡ ಐದನಾಳ, ಜಂಗಮಮೂರ್ತಿ, ಶಿವಕುಮಾರ ನಂದಿಕೋಲಮಠ, ಅಮರೇಶ, ಶ್ರೀಧರ ಕಿರಗಿ, ಮಲ್ಲಿಕಾರ್ಜುನ ನಾಡಗೌಡ, ಶ್ರೀಕಾಂತ ಮಠ, ಶಿವಮ್ಮ ಪಟ್ಟದಕಲ್, ಲಕ್ಷ್ಮೀದೇವಿ ನಡುವಿನಮನಿ, ಗುರುಬಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts