ದಲಿತ ಕಾರ್ಮಿಕ ನಾಯಕಿ ನೋದೀಪ್ ಕೌರ್​​ಗೆ ಜಾಮೀನು

ಚಂಡೀಗಢ: ಒಂದೂವರೆ ತಿಂಗಳಿಂದ ಹರಿಯಾಣದ ಕರ್ಣಾಲ್ ಜೈಲಿನಲ್ಲಿ ಬಂಧನದಲ್ಲಿರುವ ದಲಿತ ಕಾರ್ಮಿಕ ಚಳುವಳಿಕಾರ್ತಿ ನೊದೀಪ್ ಕೌರ್​ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಇಪ್ಪತ್ಮೂರು ವರ್ಷ ವಯಸ್ಸಿನ ಕೌರ್ ಮೇಲೆ ದಾಖಲಾಗಿರುವ ಸುಲಿಗೆ ಮತ್ತು ಕೊಲೆ ಯತ್ನದ ಪ್ರಕರಣದಲ್ಲಿ ಜಾಮೀನು ನೀಡಿರುವ ನ್ಯಾಯಮೂರ್ತಿ ಅವನೀಶ್ ಝಿಂಗನ್, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕೆಂಬ ಷರತ್ತು ವಿಧಿಸಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟಕ್ಕೂ ಬೆಂಬಲ ಸೂಚಿಸುತ್ತಾ, ದೆಹಲಿಯ ಕುಂಡ್ಲಿ ಗಡಿ ಭಾಗದಲ್ಲಿ … Continue reading ದಲಿತ ಕಾರ್ಮಿಕ ನಾಯಕಿ ನೋದೀಪ್ ಕೌರ್​​ಗೆ ಜಾಮೀನು