ದಲಿತ ಮುಖ್ಯಮಂತ್ರಿ ಚರ್ಚೆಗೆ ಸೀಮಿತ

blank

ಬೆಂಗಳೂರು: ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದಲಿತರನ್ನು ವೋಟ್ ಬ್ಯಾಂಕ್​ನಂತೆ ಬಳಸಿಕೊಂಡು ವಂಚಿಸುತ್ತಲೇ ಬಂದಿದೆ. ಈಗಲೂ ಅಷ್ಟೇ ದಲಿತ ಮುಖ್ಯಮಂತ್ರಿ ಎನ್ನುವುದು ಚರ್ಚೆಗೆ ಸೀಮಿತವೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಸಿಎಂ ಆಗುವ ಅವಕಾಶವಿದ್ದಾಗ ಡಾ.ಜಿ.ಪರಮೇಶ್ವರರನ್ನು ಸೋಲಿಸಿ ಮೂಲೆಗುಂಪು ಮಾಡಿದರು. ಈಗ ಕಾಲಾವಧಿ ಇದೆಯಲ್ಲ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲೆಸೆದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಆಗಲಿ ಎಂಬ ಘೊಷಣೆಗಳು ಮೊಳಗಿವೆ. ಈ ವೇಳೆ ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯರನ್ನು ಅಪಮಾನಿಸಲಾಗಿದೆ. ಇದನ್ನು ಸಹಿಸಿಕೊಂಡು ಸಿದ್ದರಾಮಯ್ಯ ಹೇಗೆ ಸುಮ್ಮನಿದ್ದಾರೋ ತಿಳಿಯದು. ನಾನಾಗಿದ್ದರೆ ಒಂದು ಕ್ಷಣವೂ ಇರದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೆ ಎಂದು ಕಾಲೆಳೆದರು. ಸಿಎಂ ಆಗುವುದಕ್ಕೆ ಯೋಗದ ಜತೆಗೆ ಯೋಗ್ಯತೆಯು ಅಷ್ಟೇ ಮುಖ್ಯವೆಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಕುಟುಕಿದರು.

Share This Article

ಇಂಟರ್ನೆಟ್​ ಆಫ್​ ಮಾಡದೇ ದಿಂಬಿನಡಿ ಮೊಬೈಲಿಟ್ಟು​ ಮಲಗ್ತೀರಾ? ಹುಷಾರ್! ಇದರಿಂದಾಗೋ ಹಾನಿ ಬಗ್ಗೆ ತಿಳಿಯಿರಿ | Mobile Internet

Mobile Internet:ಇಂದಿನ ಅತ್ಯಾಧುನಿಕ ಯುಗದಲ್ಲಿ ಮೊಬೈಲ್ ಫೋನ್​ ಜೀವನದ ಅಂಗವಾಗಿಬಿಟ್ಟಿದೆ. ನಾವು ಅದರಲ್ಲಿ ಎಷ್ಟು ಮಗ್ನರಾಗಿದ್ದೇವೆ…

ಮಹಾ ಶಿವರಾತ್ರಿಯಂದು ಬುಧ ಸಂಕ್ರಮಣ: ಈ 5 ರಾಶಿವರಿಗೆ ಅದೃಷ್ಟವೋ ಅದೃಷ್ಟ, ಧನ ಲಾಭ! Zodiac Signs

Zodiac Signs : ಮಹಾ ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಫೆಬ್ರವರಿ 26 ರಂದು ಮಹಾ ಶಿವನ…

ನಿದ್ರೆಯಿಂದ ಕ್ಯಾನ್ಸರ್​ವರೆಗೆ… ದ್ರಾಕ್ಷಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ! Grapes

Grapes : ಪ್ರತಿದಿನ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದ್ರಾಕ್ಷಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.…