More

    ನಿತ್ಯಭವಿಷ್ಯ|ಈ ರಾಶಿಯವರು ವಕ್ರಬುದ್ಧಿಯ ಜನ ನಿಮ್ಮನ್ನು ಹಣಿಯಲು ಕಾದಿದ್ದಾರೆ ಎಂಬ ಭ್ರಮೆಯಲ್ಲಿರುತ್ತಾರೆ..

    ಮೇಷ: ಹೀನ ನಡತೆಯ ಜನರನ್ನು ದೂರವಿಡಲು ಧೈರ್ಯದ ಹೆಜ್ಜೆಯನ್ನು ಇರಿಸಿ. ಒಳಿತಿನ ಗುರಿಗಾಗಿ ದೃಷ್ಟಿ ಇರಿಸಿ.

    ಶುಭಸಂಖ್ಯೆ: 1

    ವೃಷಭ: ಗುಟ್ಟಾಗಿ ನಡೆಸುವ ಕೆಲಸ ಇದ್ದರೆ ಸಾಕಷ್ಟು ಎಚ್ಚರಿಕೆಯಿಂದ ಗುಪ್ತವಾಗಿ ಪೂರೈಸಿ. ಪಾರ್ವತಿಯ ಕೃಪೆ ಲಭ್ಯ.

    ಶುಭಸಂಖ್ಯೆ: 4

    ಮಿಥುನ: ವಿವೇಕದ ಹೆಜ್ಜೆಗಳಿಂದಲೇ ನಿಮ್ಮ ಅನೇಕ ಗೆಲುವುಗಳು ಸಿಕ್ಕಿವೆ. ಈ ಮಾದರಿಯನ್ನೇ ಬಿಡದೆ ಮುಂದುವರಿಸಿ.

    ಶುಭಸಂಖ್ಯೆ: 9

    ಕಟಕ: ಮಹತ್ವದ ಜನರು ಹೊಸ ಸಂಸ್ಥೆಗಳನ್ನು ಕಟ್ಟಲು ನಿಮ್ಮ ಸಲಹೆಗಳನ್ನು ಕೇಳಲೆಂದು ಬರಬಹುದು. ಸಲಹೆ ಕೊಡಿ.

    ಶುಭಸಂಖ್ಯೆ: 5

    ಸಿಂಹ: ದೂರದ ಬೆಟ್ಟದಲ್ಲಿ ನುಣ್ಣಗೆ ಇರುವ ವಸ್ತುಗಳಿವೆ ಎಂಬುದು ಕೇವಲ ಕಣ್ಣಿನ ಭ್ರಮೆ. ಇದ್ದುದನ್ನೇ ಚೆನ್ನಾಗಿ ಬೆಳೆಸಿ.

    ಶುಭಸಂಖ್ಯೆ: 2

    ಕನ್ಯಾ: ಗುರು ದತ್ತಾತ್ರೇಯನನ್ನು ಆರಾಧಿಸುವ ವಿಚಾರ ಒಳಿತು. ಅನೇಕ ಕೆಲಸಗಳಲ್ಲಿ ಗೆಲುವಿನ ನಗೆ ಬೀರುತ್ತೀರಿ.

    ಶುಭಸಂಖ್ಯೆ: 8

    ತುಲಾ: ಹೊಸ ಜನರ ಸಂಪರ್ಕದಿಂದ ಕೇವಲ ಒಳಿತುಗಳನ್ನು ಸ್ವೀಕರಿಸಿ. ಅವರಿಗೆ ಸಲುಗೆ ಮಾತ್ರ ನೀಡಲೇಬೇಡಿ.

    ಶುಭಸಂಖ್ಯೆ: 6

    ವೃಶ್ಚಿಕ: ವಕ್ರಬುದ್ಧಿಯ ಜನ ನಿಮ್ಮನ್ನು ಹಣಿಯಲು ಕಾದಿದ್ದಾರೆ ಎಂಬ ಭ್ರಮೆಯಲ್ಲಿ ಇರಬೇಡಿ. ಧೈರ್ಯದಿಂದ ಮುನ್ನುಗ್ಗಿ.

    ಶುಭಸಂಖ್ಯೆ: 1

    ಧನುಸ್ಸು: ಸಾಕಷ್ಟು ದೂರ ಕ್ರಮಿಸಿದ ಮೇಲೆ ಯೋಜನೆ ಕೈಬಿಡುವ ಧೈರ್ಯ ತೋರಿಸದಿರಿ. ಒಳಿತನ ದಾರಿ ಇದೆ.

    ಶುಭಸಂಖ್ಯೆ: 7

    ಮಕರ: ಈ ಸಂಸಾರ ಸಾಕಪ್ಪ ಎಂಬ ವಿಚಾರದೊಂದಿಗೆ ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ. ತಾಳ್ಮೆಯಿಂದಲೇ ನಿಭಾಯಿಸಿ.

    ಶುಭಸಂಖ್ಯೆ: 3

    ಕುಂಭ: ಪ್ರತಿ ಯುದ್ಧವನ್ನೂ ಗೆಲ್ಲಲೇಬೇಕು ಎಂಬ ಒತ್ತಡ ನಿರ್ವಿುಸಿಕೊಳ್ಳದಿರಿ. ನಿಮ್ಮ ಕೆಲಸ ನೀವು ಮಾಡಿ. ಲಾಭವಿದೆ.

    ಶುಭಸಂಖ್ಯೆ: 8

    ಮೀನ: ವರ್ತಮಾನವನ್ನು ಪ್ರೀತಿಸಿ. ನಿನ್ನೆಯ ನೋವು ಹಾಗೂ ನಾಳಿನ ಭ್ರಮೆಯನ್ನು ದೂರ ತಳ್ಳಿ. ಗೆಲ್ಲುವ ಅವಕಾಶವಿದೆ.

    ಶುಭಸಂಖ್ಯೆ: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts