More

    ನಿತ್ಯ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳಿಂದ ವೃಥಾ  ಆರೋಪ ಬರಬಹುದು. ಈ ಬಗ್ಗೆ ಎಚ್ಚರ ಇರಲಿ

    ಮೇಷ: ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನೀವು ಚಡಪಡಿಸುತ್ತೀರಿ. ಆದರೆ ಇತರರು ಕೂಡ ಹೀಗೆಯೇ ಇರಲಾರರು. ಶುಭಸಂಖ್ಯೆ: 5

    ವೃಷಭ: ವೈಯಕ್ತಿಕ ವಿಕಾಸದ ದೃಷ್ಟಿಯಿಂದ ಉತ್ತಮವಾದ ಬೆಳವಣಿಗೆಯೊಂದಕ್ಕೆ ಇಂದಿನ ಹೆಜ್ಜೆಗಳು ಮುನ್ನುಗ್ಗಲಿವೆ. ಶುಭಸಂಖ್ಯೆ: 9

    ಮಿಥುನ: ಹಿತಶತ್ರುಗಳಿಂದ ನಿಮ್ಮ ಮೇಲೆ ವೃಥಾ ಒಂದು ಆರೋಪವು ಬರಬಹುದು. ಈ ಬಗ್ಗೆ ಎಚ್ಚರ ಇದ್ದೇ ಇರಲಿ. ಶುಭಸಂಖ್ಯೆ: 2

    ಕಟಕ: ಆಕರ್ಷಕವಾಗಿ ಮಾತನಾಡುವ ಜನ ನಿಮ್ಮಿಂದ ತೆಪ್ಪಗೆ ತಮ್ಮ ಕಾರ್ಯವನ್ನು ಮಾಡಿಕೊಳ್ಳುತ್ತಾರೆ. ಜೋಕೆ. ಶುಭಸಂಖ್ಯೆ: 6

    ಸಿಂಹ: ಹೊಸ ಜವಾಬ್ದಾರಿಯು ಒದಗಿಬರುವ ಮುನ್ನ ಕಚೇರಿಯಲ್ಲಿ ಬಿಗಿ ವಾತಾವರಣ ಉಂಟಾಗಲು ಸಾಧ್ಯ. ಶುಭಸಂಖ್ಯೆ: 4

    ಕನ್ಯಾ:  ಶ್ರೀ ವೆಂಕಟೇಶ್ವರನ ದಿವ್ಯ ಅನುಗ್ರಹದಿಂದ ಕೌಟುಂಬಿಕವಾಗಿ ಸಂತೋಷದ ವಾರ್ತೆಗಳನ್ನು ಕೇಳಲಿದ್ದೀರಿ. ಶುಭಸಂಖ್ಯೆ: 8

    ತುಲಾ: ನಿಮ್ಮಲ್ಲಿ ಚೈತನ್ಯವಿದೆ. ಆದರೆ ಸೂಕ್ತವಾದ ಜನರು ನಿಮಗೆ ಅವಕಾಶ ಕೊಡದೆ ಬೇಸರ ಉಂಟಾಗಲು ಸಾಧ್ಯ. ಶುಭಸಂಖ್ಯೆ: 2

    ವೃಶ್ಚಿಕ: ಖರ್ಚು-ವೆಚ್ಚಗಳ ಯಾದಿಯನ್ನು ಜತನದಿಂದ ನಿಯಂತ್ರಣ ಮಾಡಿಕೊಳ್ಳಿ. ಗೊಂದಲವಾಗಲು ಬಿಡದಿರಿ. ಶುಭಸಂಖ್ಯೆ: 7

    ಧನಸ್ಸು: ಒಡಹುಟ್ಟಿದವರೇ ನಿಮ್ಮ ವಿರುದ್ಧ ಮನಸ್ಸನ್ನು ನೋಯಿಸುವ ಮಾತಾಡಬಹುದು. ತುಸು ಎಚ್ಚರ ಇರಲಿ. ಶುಭಸಂಖ್ಯೆ: 3

    ಮಕರ: ಅಪರೂಪದ ಅವಕಾಶವೊಂದನ್ನು ಪಡೆದು ಸೋಜಿಗಪಡುತ್ತೀರಿ. ಅದನ್ನು ಯಶಸ್ವಿಯಾಗಿ ಸಾಧಿಸಿ ಗೆಲ್ಲಿ. ಶುಭಸಂಖ್ಯೆ: 5

    ಕುಂಭ: ಮುಂಗೋಪದಿಂದಾಗಿ ಈಗಾಗಲೇ ಅವಸ್ಥೆಪಟ್ಟಿದ್ದೀರಿ. ನಿಮ್ಮ ಮೇಲೆ ನಿಮಗೆ ಸೂಕ್ತ ನಿಯಂತ್ರಣ ಇರಲಿ. ಶುಭಸಂಖ್ಯೆ: 1

    ಮೀನ: ದೇವಿ ದುರ್ಗಾಮಾತೆಯನ್ನು ಸ್ತುತಿಸಿ. ಒಳಿತಿನ ದಾರಿಗೊಂದು ಅವಕಾಶ ಸಿಗಲು ಸುಲಭವಾದೀತು. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts