More

    ನಿತ್ಯ ಭವಿಷ್ಯ: ಈ ರಾಶಿಯವರು ತಮ್ಮ ಕುಲದೇವರನ್ನು ನೆನೆಯುವ ಕಾರಣದಿಂದ ಮನದ ಸಂಕಲ್ಪಗಳಿಗೆ ಗೆಲುವು ಪ್ರಾಪ್ತವಾಗಲಿದೆ

    ಮೇಷ: ಸುಮ್ಮನೆ ಒಂದು ಕೆಲಸ ಮಾಡಿಕೊಂಡು ಹೋಗುವುದಕ್ಕಿಂತ ನಿರ್ದಿಷ್ಟವಾದ ಗುರಿ ಇದ್ದರೆ ಉತ್ತಮ. ಶುಭಸಂಖ್ಯೆ: 7

    ವೃಷಭ: ಜನರ ಪ್ರಶಂಸೆಯನ್ನು ಗಳಿಸುವಂಥ ಉತ್ತಮವಾದ ಪ್ರಾರಂಭವು ನಿಮ್ಮ ಹಿರಿಯತನಕ್ಕೆ ಲಭ್ಯವಾಗಲಿದೆ. ಶುಭಸಂಖ್ಯೆ: 3

    ಮಿಥುನ: ನಿಮ್ಮದೇ ಆದ ವಹಿವಾಟುಗಳನ್ನು ವಿಸ್ತರಿಸುವ ಸದವಕಾಶಗಳು ಬೇಗ ಕೂಡಿಬರುವ ಸಾಧ್ಯತೆಗಳಿವೆ. ಶುಭಸಂಖ್ಯೆ: 9

    ಕಟಕ: ಕಾರಣವಿರದೆ ಬಂದು ಹರಟೆ ಹೊಡೆಯುವ, ನಿಮ್ಮ ಕೆಲಸ ಹಾಳುಮಾಡುವ ಜನರಿಂದ ದೂರ ಇರಿ. ಶುಭಸಂಖ್ಯೆ: 6

    ಸಿಂಹ: ಕಾಯಕ ನಾಳೆಗೂ ಮುಂದುವರಿದೀತು, ಸ್ವಲ್ಪ ಕಷ್ಟವಾದೀತು. ಆದರೆ ವಿಜಯವನ್ನು ನೀವೇ ಪಡೆಯುವಿರಿ. ಶುಭಸಂಖ್ಯೆ: 2

    ಕನ್ಯಾ: ನಿಮ್ಮ ಕುಲದೇವರನ್ನು ನೆನೆಯುವ ಕಾರಣದಿಂದಾಗಿ ಮನದ ಸಂಕಲ್ಪಗಳಿಗೆ ಗೆಲುವು ಪ್ರಾಪ್ತವಾಗಲಿದೆ. ಶುಭಸಂಖ್ಯೆ: 8

    ತುಲಾ: ನಿಗೂಢ ವಿಷಯಗಳು ಅಂತರಂಗದಲ್ಲಿ ಭಯವನ್ನು ತರುವ ಸಾಧ್ಯತೆಗಳು ಜಾಸ್ತಿ. ಆಶಾವಾದಿಗಳಾಗಿರಿ. ಶುಭಸಂಖ್ಯೆ: 5

    ವೃಶ್ಚಿಕ: ಇನ್ನೆಲ್ಲೋ ಅರ್ಥಪೂರ್ಣ ವೇದಿಕೆ ಇದೆ ಎಂಬ ವ್ಯರ್ಥ ಹುಡುಕಾಟ ಬಿಡಿ. ನಿಮ್ಮಲ್ಲೇ ಸಾರ್ಥಕತೆ ಇದೆ. ಶುಭಸಂಖ್ಯೆ: 3

    ಧನಸ್ಸು: ಪರಶಿವನನ್ನು ಶ್ರದ್ಧಾಭಕ್ತಿಯಿಂದ ಸ್ತುತಿಸಿ. ನಿಮ್ಮ ಮನದ ಅಭಿಲಾಷೆಗಳೆಲ್ಲ ಶೀಘ್ರದಲ್ಲಿಯೇ ನೆರವೇರಲಿವೆ. ಶುಭಸಂಖ್ಯೆ: 1

    ಮಕರ: ನಿಮ್ಮ ಕಷ್ಟಗಳನ್ನು ಕೇಳಿಸಿಕೊಳ್ಳಲು ಯಾರೂ ಮುಂದೆ ಬರಲಾರರು. ನೀವೇನಿಮ್ಮ ರಕ್ಷಕರಾಗಿ ಹೆಜ್ಜೆ ಇಡಿ. ಶುಭಸಂಖ್ಯೆ: 9

    ಕುಂಭ: ಇರುವುದೆಲ್ಲವನ್ನೂ ಬಿಟ್ಟು ಇರದಿರುವುದರ ಬಗ್ಗೆ ಯೋಚಿಸಿ ಮಾನಸಿಕ ಒತ್ತಡವನ್ನು ನಿರ್ವಿುಸಿಕೊಳ್ಳದಿರಿ. ಶುಭಸಂಖ್ಯೆ: 7

    ಮೀನ: ನಿರೀಕ್ಷಿಸಲು ಸಾಧ್ಯವೇ ಇರದಂತಹ ರೀತಿಯಲ್ಲಿ ಕೈಗೊಂಡ ಯೋಜನೆಗಳು ವಿಫಲವೇ ಆಗಬಹುದು. ಎಚ್ಚರ ಇರಲಿ. ಶುಭಸಂಖ್ಯೆ: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts