More

    ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೆಲವು ಸೂಕ್ಷ್ಮ ಸಮಸ್ಯೆಗಳು ನೆಂಟರಿಷ್ಟರಿಂದಲೂ ಒಡಹುಟ್ಟಿದವರಿಂದಲೂ ಪರಿಹಾರ ಕಾಣಲಿವೆ

    ಮೇಷ: ತಂದೆ ತಾಯಿಗಳ ಆರೋಗ್ಯದ ವಿಚಾರದಲ್ಲಿ ವೈದ್ಯರನ್ನು ಸಂದರ್ಶಿಸಬೇಕಾದ ಸಂದರ್ಭ ಎದುರು ಬರಬಹುದು. ಶುಭಸಂಖ್ಯೆ: 8

    ವೃಷಭ: ನಮ್ಮ ವ್ಯಕ್ತಿತ್ವ ಅತ್ಯಂತ ಮಹತ್ವವಾದದ್ದು.ಆ ವ್ಯಕ್ತಿತ್ವಕ್ಕೆ ಧಕ್ಕೆ ತರುವವರ ಬಗೆಗೆ ಮುನ್ನೆಚ್ಚರಿಕೆ ಇದ್ದೇ ಇರಲಿ. ಶುಭಸಂಖ್ಯೆ: 1

    ಮಿಥುನ: ನೀವು ಉತ್ಸಾಹದಿಂದ ಮುಂದುವರಿದಷ್ಟೂ ಅನೇಕ ದುರದೃಷ್ಟಗಳು ಎದುರಾಗುವ ಸಮಸ್ಯೆ ಬರಬಹುದು. ಶುಭಸಂಖ್ಯೆ: 6

    ಕಟಕ: ನೀವು ಧೈರ್ಯವಂತರು ಎಂಬುದರಲ್ಲಿ ಅನುಮಾನವಿಲ್ಲ. ಆದರೂ ದುರ್ಗಾದೇವಿಯ ಅನುಗ್ರಹಕ್ಕಾಗಿ ಸ್ತುತಿಸಿ. ಶುಭಸಂಖ್ಯೆ: 3

    ಸಿಂಹ: ಎಲ್ಲ ವಿಚಾರಗಳೂ ಸೂಕ್ತವಾಗಿ ಸಾಗುತ್ತಿರುವಾಗಲೇ ಮಕ್ಕಳ ಬಗೆಗಿನ ಸಮಸ್ಯೆ ಎದುರಾಗಬಹುದು. ಶುಭಸಂಖ್ಯೆ: 5

    ಕನ್ಯಾ: ಸಂಗಾತಿಯ ಕೋಪದಿಂದಾಗಿ ಹಿನ್ನಡೆ ಎಂಬುದು ನಿಮ್ಮನ್ನು ಕಾಡಿದರೂ ನೀವು ಮಾತ್ರ ಕೋಪ ಮಾಡಿಕೊಳ್ಳದಿರಿ. ಶುಭಸಂಖ್ಯೆ: 7

    ತುಲಾ: ಗುರು ದತ್ತಾತ್ರೇಯನ ಅನುಗ್ರಹದಿಂದ ಬದುಕಿನ ಯಶಸ್ಸಿನ ಮಾರ್ಗ, ಭಾಗ್ಯಕ್ಕಾಗಿನ ದಾರಿ ಲಭ್ಯವಾಗಲಿದೆ. ಶುಭಸಂಖ್ಯೆ: 9

    ವೃಶ್ಚಿಕ: ಎಲ್ಲವೂ ನಿರಾಳವಾಗಿ ನೆರವೇರುವ ಅದೃಷ್ಟದ ದಿನವಾಗಿದೆ. ಸುಖವಾಗಿರಲು ಕೂಡ ವಿಪುಲ ಅವಕಾಶಗಳಿವೆ. ಶುಭಸಂಖ್ಯೆ: 4

    ಧನಸ್ಸು: ಕಾಲುನೋವಿನ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಮಾಡದಿರಿ. ಈ ಕೂಡಲೇ ಅದರ ನಿವಾರಣೆಗೆ ಪ್ರಯತ್ನ ಮಾಡಿ. ಶುಭಸಂಖ್ಯೆ: 8

    ಮಕರ: ನಿಮ್ಮ ಕೆಲವು ಸೂಕ್ಷ್ಮವಾದ ಸಮಸ್ಯೆಗಳು ನೆಂಟರಿಷ್ಟರಿಂದಲೂ ಒಡಹುಟ್ಟಿದವರಿಂದಲೂ ಪರಿಹಾರ ಕಾಣಲಿವೆ. ಶುಭಸಂಖ್ಯೆ: 9

    ಕುಂಭ: ದಿವ್ಯದ ಅನುಗ್ರಹದಿಂದಲೇ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕು. ಕುಬೇರ ಅಷ್ಟೋತ್ತರವನ್ನು ಪಠಿಸಿ. ಶುಭಸಂಖ್ಯೆ: 2

    ಮೀನ: ಭೀತಿಯನ್ನು ತರುವಂತಹ ಕನಸು ಬೀಳುವ ಸಾಧ್ಯತೆಗಳು ಅಧಿಕ. ಎಡಬಿಡದೆ ಆಂಜನೇಯನನ್ನು ಸ್ಮರಿಸಿ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts