More

    ಡಿ.ಕೆ.ಶಿವಕುಮಾರ್​ ಅವರದ್ದು ಏಸು ನಿಷ್ಠೆಯಲ್ಲ, ಸೋನಿಯಾ ನಿಷ್ಠೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    ಗದಗ: ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ವಿಚಾರವಾಗಿ ಡಿ.ಕೆ.ಶಿವಕುಮಾರ್​ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಡಿ.ಕೆ.ಶಿವಕುಮಾರ್​ಗೆ ಹೇಗಾದರೂ ಮಾಡಿ ಪ್ರತಿಪಕ್ಷದ ನಾಯಕರಾಗಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಆಗಬೇಕು ಎಂಬುದು ಉದ್ದೇಶ. ಹಾಗಾಗಿ ತಮ್ಮ ನಿಷ್ಠೆಯನ್ನು ಅವರು ಸೋನಿಯಾ ಗಾಂಧಿಗೆ ತೋರಿಸಬೇಕಾಗಿದೆ. ನಿಷ್ಠೆ ಏಸು ಕ್ರಿಸ್ತನಿಗೆ ಅಲ್ಲ, ಸೋನಿಯಾ ಗಾಂಧಿಗೆ. ಏನು ಮಾಡಿದರೆ ಸೋನಿಯಾ ಗಾಂಧಿಯವರಿಗೆ ಇಷ್ಟ ಎಂಬುದು ಡಿ.ಕೆ.ಶಿವಕುಮಾರ್​ಗೆ ಗೊತ್ತು ಎಂದು ಹೇಳಿದರು.

    ಸರಿಯಾಗಿ ಅನುಮತಿ ಪಡೆಯದೆ ಸರ್ಕಾರಿ ಜಾಗದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದು ತಪ್ಪು. ಹಾಗಾಗಿ ಬಿಜೆಪಿ ಪಕ್ಷ ಆಕ್ಷೇಪ ಮಾಡಿದೆ. ತುಷ್ಟೀಕರಣದ ರಾಜಕಾರಣಕ್ಕೆ ಬಿಜೆಪಿಯ ವಿರೋಧ ಇದೆ. ಬಿಜೆಪಿ ಮುಸ್ಲಿಂ ವಿರೋಧಿಯೂ ಅಲ್ಲ, ಕ್ರಿಶ್ಚಿಯನ್​ ವಿರೋಧಿಯೂ ಅಲ್ಲ ಎಂದು ಹೇಳಿದರು.

    ಕಲ್ಲಡ್ಕ ಪ್ರಭಾಕರ್​ ಭಟ್​ ಅವರು ಅಲ್ಲಿಗೆ ಹೋಗಿ ಯಾಕೆ ಭಾಷಣ ಮಾಡಬೇಕು ಎಂದು ಯು.ಟಿ.ಖಾದರ್​ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯು.ಟಿ.ಖಾದರ್​ ಅವರೂ ಕೂಡ ಬೇರೆ ಕಡೆಗೆ ಹೋಗಿ ಭಾಷಣ ಮಾಡುತ್ತಾರೆ. ಪೌರತ್ವ ಕಾಯ್ದೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್​ ಅವರು ಎಲ್ಲಿ ಭಾಷಣ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವುದು ಅವರಿಗೇ ಬಿಟ್ಟಿದ್ದು. ಆಯಾ ಜಿಲ್ಲಾಡಳಿತ ಅದನ್ನು ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts