ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಚಿತ್ರದುರ್ಗ: ರಾತ್ರೋರಾತ್ರಿ ಮನೆಯಲ್ಲಿ ಕಳ್ಳತನ ಮಾಡಲೆಂದು ಬಂದ ಖದೀಮರು ಚಿನ್ನಾಭರಣ, ನಗದು ದೋಚಿದ್ದಲ್ಲದೆ, ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೂ ಕದ್ದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಕಾರಿನಲ್ಲಿದ್ದ ವಸ್ತುಗಳನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಕಳ್ಳತನ ಮಾಡಿದ 24 ಗಂಟೆಯೊಳಗೆ ಆ ಕಾರಿನ ಜತೆಗೆ ಚಿನ್ನಾಭರಣವನ್ನೂ ವಾಪಸ್​ ಬಿಟ್ಟು ಎಸ್ಕೇಪ್​ ಆಗಿದ್ದಾರೆ. ಹೌದು ಇಂತಹದ್ದೊಂದು ಘಟನೆ ಚಿತ್ರದುರ್ಗದ ಬಸವೇಶ್ವರ ನಗರದಲ್ಲಿ ಸಂಭವಿಸಿದೆ. ಮಾ.13ರ ರಾತ್ರಿ ಎಸ್ಪಿ ಕಚೇರಿಯ ಸಿಪಿಐ ಮೃತ್ಯುಂಜಯರ ಅವರ ಮನೆಯಲ್ಲಿ ಕಳವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ … Continue reading ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!