ಕೊರೊನಾ ಶಂಕಿತ ವ್ಯಕ್ತಿ ಮಂಗಳೂರು ಆಸ್ಪತ್ರೆಯಿಂದ ಪರಾರಿ…ಮನೆಗೆ ಬೀಗ; ಪೊಲೀಸರಿಗೆ ದೂರು ನೀಡಿದ ವೈದ್ಯರು

ಮಂಗಳೂರು: ಶಂಕಿತ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಉಳ್ಳಾಲ ಮೂಲದ ವ್ಯಕ್ತಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು ಆತಂಕ ಮೂಡಿಸಿದೆ. ಈ ವ್ಯಕ್ತಿ ದುಬೈನಿಂದ ವಿಮಾನದಲ್ಲಿ ಬಂದಿದ್ದ. ಏರ್​ಪೋರ್ಟ್​ನಲ್ಲಿ ಸ್ಕ್ರೀನಿಂಗ್​ ಟೆಸ್ಟ್​ ಮಾಡಿದಾಗ ಆತನಲ್ಲಿ ಜ್ವರದ ಲಕ್ಷಣ ಕಂಡುಬಂದಿತ್ತು. ಕೊರೊನಾ ತಗುಲಿರಬಹುದಾದ ಶಂಕೆಯಲ್ಲಿ ರಾತ್ರಿಯೇ ವೆನ್ಲಾಕ್​ಗೆ ಸೇರಿಸಲಾಗಿತ್ತು. ಆತನ ತಪಾಸಣೆ ಪ್ರಕ್ರಿಯೆ ಪೂರ್ಣವಾಗುವ ಮೊದಲೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ರಾತ್ರಿ ಅಡ್ಮಿಟ್ ಆದವನು ಬೆಳಗ್ಗೆಯಷ್ಟರಲ್ಲಿ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮಂಗಳೂರು ದಕ್ಷಿಣ … Continue reading ಕೊರೊನಾ ಶಂಕಿತ ವ್ಯಕ್ತಿ ಮಂಗಳೂರು ಆಸ್ಪತ್ರೆಯಿಂದ ಪರಾರಿ…ಮನೆಗೆ ಬೀಗ; ಪೊಲೀಸರಿಗೆ ದೂರು ನೀಡಿದ ವೈದ್ಯರು