ಚೆಕ್​ಗೆ ನಕಲಿ ಸಹಿ ಮಾಡಿ ಹಣ ಡ್ರಾ

blank

ಸಾಸ್ವೆಹಳ್ಳಿ: ಗಮನಕ್ಕೆ ಬಾರದಂತೆ ತಮ್ಮ ಜಮೀನಿನ ಮೇಲೆ ಬೆಳೆ ಸಾಲ ಮಂಜೂರು ಮಾಡಿ, ಆ ಹಣವನ್ನು ವಿಎಸ್​ಎಸ್​ಎನ್ ಕಾರ್ಯದರ್ಶಿ ಜಿ.ಕೆ.ರಾಜು ಡಿಸಿಸಿ ಬ್ಯಾಂಕ್​ನಲ್ಲಿ ಡ್ರಾ ಮಾಡಿಕೊಂಡಿದ್ದಾರೆ ಎಂದು ರೈತ ಎಚ್.ಕೆ. ಸತೀಶ್ ಆರೋಪಿಸಿದರು.

blank

ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮದ ಬ್ಯಾಂಕ್ ಆವರಣದಲ್ಲಿ ಹೊನ್ನಾಳಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ನವೀನ್​ಕುಮಾರ್ ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸುರೇಶ್ ಅವರ ಸಮ್ಮುಖದಲ್ಲಿ ನಡೆದ ಆಡಳಿತ ಮಂಡಳಿ ಮತ್ತು ಶೇರುದಾರರ ಸಭೆಯಲ್ಲಿ ಮಾತನಾಡಿದರು.

2023 -24ರಲ್ಲಿ 1 ಲಕ್ಷ ರೂ. ಬೆಳೆ ಸಾಲ ಪಡೆದು ಸಾಲದ ಹಣ ಜಮೆ ಮಾಡಿ ಬ್ಯಾಂಕಿನಿಂದ ಕ್ಲಿಯರೆನ್ಸ್ ಪಡೆದಿದ್ದೆ, ಆದರೆ 2024-25 ನೇ ಸಾಲಿನಲ್ಲಿ ನನ್ನ ಗಮನಕ್ಕೆ ಬಾರದೆ ನನ್ನ ಜಮೀನಿನ ಮೇಲೆ 1 ಲಕ್ಷ ರೂ. ಸಾಲ ಮಂಜೂರಾಗಿ, ವಿಎಸ್​ಎಸ್​ಎನ್ ಬ್ಯಾಂಕಿನ ಮೂಲ ಬ್ಯಾಂಕ್ ಡಿಸಿಸಿ ಬ್ಯಾಂಕ್​ನಲ್ಲಿರುವ ನನ್ನ ಖಾತೆಗೆ ಹಣ ಜಮೆಯಾಗಿದೆ. ಚೆಕ್​ಗೆ ನಕಲಿ ಸಹಿ ಮಾಡಿ ಆ ಹಣ ತೆಗೆಯಲಾಗಿದೆ. ಕಾರ್ಯದರ್ಶಿ ಬೆಳೆ ಸಾಲ ಮಂಜೂರು ಮಾಡಿದ್ದೇಕೆ? ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿದ್ದು ಯಾರು? ಎಂಬುದು ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಆಡಳಿತ ಮಂಡಳಿಯ ಸಹಮತದಿಂದ ಬ್ಯಾಂಕಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ಲಿಖಿತ ರೂಪದಲ್ಲಿ ದಾವಣಗೆರೆಯ ಸಹಕಾರ ಸಂಘಗಳ ಸಹಾಯಕ (ಎಆರ್) ನಿಬಂಧಕರಿಗೆ ತನಿಖೆಗೆ ಹಾಗೂ ಸೂಕ್ತ ಕ್ರಮಕ್ಕಾಗಿ ಪತ್ರ ಬರೆಯಲು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತೀರ್ವನಿಸಿದರು. ಜತೆಗೆ ಆರೋಪಿತ ರೈತನಿಂದ ದೂರು ಪಡೆದು, ಅದನ್ನು ಎಆರ್ ಅವರಿಗೆ ನೀಡಲು ತಿಳಿಸಿದರು.

ಆರೋಪಿತ ಕೆ.ಜಿ. ರಾಜು ಆರೋಗ್ಯದ ಸಮಸ್ಯೆ ಹೇಳಿಕೊಂಡು ಸಭೆಗೆ ಬಂದಿಲ್ಲ ಎಂದು ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ರಂಗಪ್ಪ ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಶೇರುದಾರರು ಇದ್ದರು.

Share This Article

ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional

devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…

ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್​ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್​ | Summer Tips

Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…