ಕಣ್ಣಿನ ಸಮಸ್ಯೆ ತಡೆಗೆ ಮೊಬೈಲ್ ಬಳಕೆ ನಿಯಂತ್ರಿಸಿ, ನೇತ್ರ ತಜ್ಞೆ ಡಾ. ಸೌಮ್ಯಾ ಕೆ.ವಿ ಸಲಹೆ

blank

ಯಲ್ಲಾಪುರ: ಕಣ್ಣಿನ ಸಮಸ್ಯೆ ಮಕ್ಕಳಲ್ಲಿಯೂ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳು ಮೊಬೈಲ್ ಬಳಸುವುದನ್ನು ನಿಯಂತ್ರಿಸಿದರೆ ಈ ಸಮಸ್ಯೆ ದೂರವಾಗಬಹುದು. ಈ ನಿಟ್ಟಿನಲ್ಲಿ ಹಿರಿಯರು ಪ್ರಯತ್ನಿಸಬೇಕು ಎಂದು ನೇತ್ರ ತಜ್ಞೆ ಡಾ. ಸೌಮ್ಯಾ ಕೆ.ವಿ ಹೇಳಿದರು.

ಅವರು ಪಟ್ಟಣದ ಅಡಕೆ ಭವನದಲ್ಲಿ ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗದ ಆಶ್ರಯದಲ್ಲಿ ಕುಮಟಾದ ಲಯನ್ಸ್ ರೇವಣಕರ್ ಚಾರಿಟಬಲ್ ಕಣ್ಣಿನ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಕಣ್ಣಿನ ಪೊರೆ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಶಿಬಿರ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ಮರಣದ ನಂತರವೂ ಜೀವಂತವಾಗಿರಲು ನೇತ್ರದಾನ ಮಾಡುವಂತೆ ಸಲಹೆ ನೀಡಿದರು.

ರೇವಣಕರ್ ಆಸ್ಪತ್ರೆಯ ಡಾ.ರಾಜಶೇಖರ, ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ಶೇಷಗಿರಿ ಪ್ರಭು, ಖಜಾಂಚಿ ಮಹೇಶ ಗೌಳಿ ಇದ್ದರು. ಎಸ್.ಎಲ್. ಭಟ್ಟ ನಿರ್ವಹಿಸಿದರು.

ಕುಮಟಾದ ಲಯನ್ಸ್ ರೇವಣಕರ್ ಚಾರಿಟಬಲ್ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದವರಿಗೆ ತಪಾಸಣೆ ನಡೆಸಿದರು.

Share This Article

ಈ 3 ರಾಶಿಯ ಪುರುಷರು ಪ್ರೀತಿಗೋಸ್ಕರ ತಮ್ಮ ಪ್ರಾಣ ಕೊಡಲು ಸಿದ್ಧರಾಗಿರುತ್ತಾರೆ! ನಿಮ್ಮದು ಇದೇ ರಾಶಿನಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ರುದ್ರಾಕ್ಷಿ ಧರಿಸುವ ಮುನ್ನ ಈ 9 ವಿಷಯಗಳು ನಿಮ್ಮ ಗಮನದಲ್ಲಿರಲಿ! ಇಂತಹ ತಪ್ಪುಗಳು ಆಗದಿರಲಿ… | Rudraksha

Astrology Tips: ರುದ್ರಾಕ್ಷಿ ಎಂಬ ಪದ ಕೇಳಿದೊಡನೆ ನಮ್ಮಲ್ಲಿ ಭಕ್ತಿ ಭವಾನೆ ಮೂಡುತ್ತದೆ. ರುದ್ರಾಕ್ಷಿಗಳಿಂದ (Rudraksha)…

ಬೇಸಿಗೆಯಲ್ಲಿ ಈ ಜ್ಯೂಸ್​ ಕುಡಿದರೆ, ಸುಡುವ ಸೂರ್ಯ ಕೂಡ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ! summer

summer:  ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ ಮತ್ತು ಜೂನ್ ವರೆಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಾನೆ. …