ಕೋಮು-ಸೌಹಾರ್ದದಿಂದ ಮೊಹರಂ ಆಚರಿಸಿ

kampli shanti sabhe

ಕಂಪ್ಲಿ: ಹಿಂದು-ಮುಸ್ಲಿಮರ ಭಾವೈಕ್ಯದ ಮೊಹರಂ ಹಬ್ಬವನ್ನು ಸರ್ವರೂ ಪ್ರೀತಿ, ಪ್ರೇಮ ಮತ್ತು ಸಂಭ್ರಮದಿಂದ ಆಚರಿಸುವಲ್ಲಿ ಜಾಗೃತಿ ತೋರಬೇಕು ಎಂದು ಪಿಐ ಸುರೇಶ್ ಎಚ್.ತಳವಾರ್ ಹೇಳಿದರು.

blank

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಮೊಹರಂ ಶಾಂತಿಸಭೆಯಲ್ಲಿ ಮಾತನಾಡಿದರು. ಪೊಲೀಸ್ ಠಾಣೆ ವ್ಯಾಪ್ತಿಯ 44 ಕಡೆ ಪೀರಲು ದೇವರಿಟ್ಟು ಮೊಹರಂ ಆಚರಿಸುತ್ತಿದ್ದು, ತಾಲೂಕಿನ ಗೋನಾಳದಲ್ಲಿ ಆಚರಣೆ ನಿಷೇಧಿಸಲಾಗಿದೆ.

ಜು.20ರಂದು ಹಬ್ಬ ಆರಂಭಗೊಳ್ಳಲಿದ್ದು, ಜು.28ರಂದು ಕತಲ್ ರಾತ್ರಿ, ಜು.29ರಂದು ದಫನ್ ಆಚರಿಸಲಾಗುತ್ತದೆ. ಮೊಹರಂ ಹಬ್ಬವನ್ನು ಕೋಮು-ಸೌಹಾರ್ದದಿಂದ ಆಚರಿಸಬೇಕು. ಅಕ್ರಮ ಮದ್ಯ ಮಾರಾಟವಾಗುತ್ತಿದ್ದಲ್ಲಿ ಗಮನಕ್ಕೆ ತರಬೇಕು.

ಇದನ್ನೂ ಓದಿ: https://www.vijayavani.net/chandrayaan-3-kottoor-source-scientist-vessel-message-carrier-ruwari-dr-darukesh

ಕಾನೂನು ಉಲ್ಲಂಘಿಸಿದಂತೆ ಹಬ್ಬ ಆಚರಣೆ ಮಾಡಬೇಕು. ನಿಯಮ ಮೀರಿ ನಡೆದುಕೊಂಡಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಿಎಸ್‌ಐ ವಿಜಯಪ್ರತಾಪ್ ಎಸ್.ಪಾಟೀಲ್, ಪ್ರಮುಖರಾದ ಎಂ.ವಲಿ ಅಹ್ಮದ್‌ಸಾಬ್, ವಾಲ್ಮೀಕಿ ಈರಣ್ಣ, ಕೆ.ಎಂ.ಹೇಮಯ್ಯಸ್ವಾಮಿ, ಕೆ.ಮೆಹಬೂಬ್, ಭಟ್ಟ ಪ್ರಸಾದ್, ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಮೆಹಮೂದ್, ಕೆ.ಮಸ್ತಾನ್‌ಸಾಬ್, ಸಿ.ಬಸವರಾಜ್ ಇತರರಿದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank