ರಂಗೇರಿದ ಕೋಮುಲ್​ ಅಖಾಡ

blank
blank

ಬೇತಮಂಗಲ: ಜೂ.25ಕ್ಕೆ ನಿಗದಿಯಾಗಿರುವ ಕೊಮುಲ್​ ನಿರ್ದೇಶಕರ ಚುನಾವಣೆ ರಂಗೇರಿದ್ದು, ಈ ಅಖಾಡಕ್ಕೆ ಕೆಜಿಎಫ್​ ಕ್ಷೇತ್ರದಿಂದ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಸ್ಪರ್ಧಿಸುವುದು ಬಹೇತಕ ಖಚಿತವಾಗಿದೆ.
ಇದುವರೆಗೂ ಒಟ್ಟು 6 ಬಾರಿ ನಿರ್ದೇಶಕರಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ ಕೋಚಿಮುಲ್​ಗೆ ಸೇವೆ ಸಲ್ಲಿಸಿದ್ದು, ಬಂಗಾರಪೇಟೆ ಮತ್ತು ಕೆಜಿಎಫ್​ ಕ್ಷೇತ್ರಗಳು ಪುನರ್ವಿಂಗಡಣೆ ಆಗಿರುವ ಹಿನ್ನೆಲೆಯಲ್ಲಿ ಕೆಜಿಎಫ್​ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಡೇರಿ ಸಂಖ್ಯೆ ಕುಸಿತ:
ಕ್ಷೇತ್ರ ಪುನರ್ವಿಂಗಡಣೆಗೂ ಮೊದಲು 124 ಡೇರಿಗಳಿದ್ದವು. ಪ್ರಸ್ತುತ ಕೆಜಿಎಫ್​ ಕ್ಷೇತ್ರಕ್ಕೆ 64 ಡೀರಿಗಳನ್ನು ವಿಂಗಡಿಸಲಾಗಿದೆ. ಆ ಪೈಕಿ ಕೆಜಿಎಫ್​ ಕ್ಷೇತ್ರದಲ್ಲಿ ನಾಲ್ಕು ಮತ್ತು ಬಂಗಾರಪೇಟೆ ಕ್ಷೇತ್ರದಲ್ಲಿ 7 ಡೀರಿಗಳು ಸೂಪರ್​ ಸೀಡ್​ ಆಗಿವೆ. ಈಗ ಕೆಜಿಎಫ್​ನಲ್ಲಿ 60 ಮತ್ತು ಬಂಗಾರಪೇಟೆಯಲ್ಲಿ 53 ಡೇರಿಗಳು ಚಾಲ್ತಿಯಲ್ಲಿವೆ. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ 21 ಮತ್ತು ಬೂದಿಕೋಟೆ ಹೋಬಳಿ ಗುಳ್ಳಹಳ್ಳಿ ಪಂಚಾಯಿತಿ ವ್ಯಾಪ್ತಿಯ 6 ಡೇರಿಗಳನ್ನು ಕೆಜಿಎಫ್​ ಕ್ಷೇತ್ರ ವ್ಯಾಪ್ತಿಗೆ ಸೇರಿಸಲಾಗಿದೆ.
ಒಟ್ಟು 60 ಡೇರಿಗಳ ಪೈಕಿ ಈಗಾಗಲೇ 58 ಮಂದಿ ಡೆಲಿಗೇಟ್​ ಮತದಾರರು ಜಯಸಿಂಹ ಅವರನ್ನು ಬೆಂಬಲಿಸಿದ್ದಾರೆ. ವಿಶೇಷವಾಗಿ ಎಸ್​.ಎನ್​.ನಾರಾಯಣಸ್ವಾಮಿ ಶಾಸಕರಾಗಿರುವ ಬಂಗಾರಪೇಟೆ ಕ್ಷೇತ್ರದ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ಒಟ್ಟು 27 ಮಂದಿ ಮತದಾರರ ಪೈಕಿ 26 ಮಂದಿ ಜಯಸಿಂಹ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ಈ ಪ್ರತಿನಿಧಿಗಳು ಕ್ಷೇತ್ರ ತೊರೆದು ಪ್ರವಾಸದ ನೆಪದಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಬಂಗಾರಪೇಟೆ ಕ್ಷೇತ್ರದಲ್ಲಿಯೂ ಡೆಲಿಗೇಟ್​ಗಳಿಗೆ ಬಲೆ ಬೀಸಬಹುದು ಎಂಬ ಆತಂಕದಲ್ಲಿರುವ ನಾರಾಯಣಸ್ವಾಮಿ ಸಾಕಷ್ಟು ಎಚ್ಚರಿಕೆ ಕ್ರಮ ಕೈ ಗೊಂಡಿದ್ದಾರೆ ಎಂಬ ಮಾತುಗಳು ಚರ್ಚೆಯಲ್ಲಿವೆ.

ಹೆಚ್ಚಿದ ಕುತೂಹಲ
ಕೆಜಿಎಫ್​ ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ಲಕ್ಷಿ$್ಮನಾರಾಯಣ ಅವರನ್ನು ಕಣಕ್ಕೆ ಇಳಿಸಲು ಶಾಸಕ ನಾರಾಯಣಸ್ವಾಮಿಗೆ ಆಸಕ್ತಿ ಇದ್ದು, ಇದಕ್ಕೆ ಪೂರಕ ಎಂಬಂತೆ ಲಕ್ಷಿನಾರಾಯಣ ಅವರು ಡೇರಿಗಳನ್ನು ಭೇಟಿ ಮಾಡಿ ಡೆಲಿಗೇಟ್​ಗಳ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಕೆಜಿಎಫ್​ ಶಾಸಕಿ ರೂಪಕಲಾ ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ಬಹುತೇಕ ಜಯಸಿಂಹ ಕೃಷ್ಣಪ್ಪ ಕಾಂಗ್ರೆಸ್​ ಅಭ್ಯರ್ಥಿಯಾಗಲಿದ್ದು, ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಇದೆ.

ಕಾಂಗ್ರೆಸ್​ ಅಭ್ಯರ್ಥಿಯಾಗಿ ಜೂ.16ರಂದು ಉಮೇದುವಾರಿಕೆ ಸಲಿಸುತ್ತೇನೆ. ಶಾಸಕಿ ರೂಪಕಲಾ ಅವರನ್ನು ಭೇಟಿಯಾಗಿ ಉಮೇದುವಾರಿಕೆ ಸಲ್ಲಿಕೆ ವೇಳೆ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೇನೆ. ಅವರು ಬರುವ ವಿಶ್ವಾಸ ಇದೆ. ಬಂಗಾರಪೇಟೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಚಟುವಟಿಕೆ ಮಾಡಿಲ. ಅದು ನನಗೆ ಸಂಬಂಧಿಸಿದ ವಿಷಯ ಅಲ.
– ಜಯಸಿಂಹ ಕೃಷ್ಣಪ್ಪ
ಕೋಚಿಮುಲ್​ ಮಾಜಿ ಅಧ್ಯಕ್ಷ

Share This Article

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…

ದೇಹದಲ್ಲಿ ಈ ವಿಚಿತ್ರ ಸೂಚನೆಗಳು ಕಾಣಿಸಿದ್ರೆ ಸಕ್ಕರೆ ಕಾಯಿಲೆ ಇದೆ ಎಂದರ್ಥ! | Diabetes

Diabetes: ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ವ್ಯಾಯಾಮದ ಕೊರತೆ ಇತ್ಯಾದಿಗಳಿಂದಾಗಿ, ಚಿಕ್ಕ…