ಭೂವಿವಾದಗಳಿಗೆ ತಲೆ ಹಾಕಬೇಡಿ: ಖಾಕಿಪಡೆಗೆ ಸಿಎಂ ಫರ್ಮಾನು

ಬೆಂಗಳೂರು: ಇತ್ತೀಚೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಭೂವ್ಯಾಜ್ಯಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣ ಇತ್ಯರ್ಥಪಡಿಸಲು ಯತ್ನಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಬೆಂಗಳೂರು ಸುತ್ತ-ಮುತ್ತಲೂ ಹಲವು ಭೂ ವ್ಯಾಜ್ಯಗಳಿವೆ. ಈ ಭೂವಿವಾದಗಳಲ್ಲಿ ಮಧ್ಯಪ್ರವೇಶಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಭೂ ಮಾಫಿಯಾ ಜತೆ ಪೊಲೀಸರು … Continue reading ಭೂವಿವಾದಗಳಿಗೆ ತಲೆ ಹಾಕಬೇಡಿ: ಖಾಕಿಪಡೆಗೆ ಸಿಎಂ ಫರ್ಮಾನು