ಮೈಸೂರು: ಸ್ವಚ್ಛತೆಯಲ್ಲಿ ಮೈಸೂರು ಮರಳಿ ನಂ.1 ಸ್ಥಾನ ಪಡೆಯಲು ಎಲ್ಲರೂ ಸಹಕಾರ ನೀಡಬೇಕೆಂದು ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮನವಿ ಮಾಡಿದರು.
ಸ್ವಚ್ಛ ಸರ್ವೇಕ್ಷಣೆಗೆ ಸಹಕಾರ ಕೊರಲು ಆಯುಕ್ತರ ನಿವಾಸದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣೆ ತಂಡ ಜ.4 ರ ನಂತರ ನಗರಕ್ಕೆ ಭೇಟಿ ನೀಡಲಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡಲು ಪಾಲಿಕೆಯೊಂದಿಗೆ ಕೈ ಜೋಡಿಸುವ ಜತೆಗೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.
ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪರಿಸರ ಇಂಜಿನಿಯರ್ಗಳಾದ ಮೈತ್ರಿ, ಪೂರ್ಣಿಮಾ, ಸಿಟಿಜನ್ ಅಲರ್ಟ್ ಟೀಮ್ನ ಕರ್ನಲ್ ರವಿ, ಮುರುಳಿ, ಜಿಎಸ್ಎಸ್ ಯೋಗ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ, ಪತಂಜಲಿ ಯೋಗ ಸಂಸ್ಥೆಯ ಶಶಿಕುಮಾರ್, ಕ್ರೆಡಾಯ್ ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷ ಎನ್.ಎಸ್. ಮರಳೀಧರ್ ಇತರರು ಇದ್ದರು.