ಹೊಳಲ್ಕೆರೆ: ತಾಳ್ಯ ಹೋಬಳಿ ಚಿತ್ರಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಮುಜುರಾಯಿ ಇಲಾಖೆಗೆ ಒಳಪಟ್ಟ ಚಿತ್ರಲಿಂಗೇಶ್ವರ ಸ್ವಾಮಿ ದೈವಸ್ಥಾನದಲ್ಲಿ ಹುಂಡಿ ಹಣ ಏಣಿಕೆ ಬುಧವಾರ ನಡೆಯಿತು. 6,27,090 ರೂ. ಸಂಗ್ರಹವಾಗಿದ್ದು, ಹಣವನ್ನು ದೇವಸ್ಥಾನ ಉಳಿತಾಯ ಖಾತೆಗೆ ಜಮಾ ಮಾಡಲಾಯಿತು.
ದೇವಸ್ಥಾನದ ಸಮಿತಿ ಅಧ್ಯಕ್ಷರು, ಸದಸ್ಯರು, ತಹಸೀಲ್ದಾರರು, ಉಪತಹಸೀಲ್ದಾರ್, ರಾಜಸ್ವ ನೀರಿಕ್ಷಕರು ಏಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.