ರಾಜಮಾತಾ ಜೀಜಾಬಾಯಿಯಂತೆ ಮಕ್ಕಳನ್ನು ಅಣಿಗೊಳಿಸಿ

blank

ಹುಬ್ಬಳ್ಳಿ : ಧರ್ಮದ ಮಾರ್ಗದಲ್ಲಿ ನಡೆಯುವುದು ಹೇಗೆಂಬ ಸಂಸ್ಕಾರವನ್ನು ರಾಜಮಾತಾ ಜೀಜಾಬಾಯಿ ಅವರು ತಮ್ಮ ಪುತ್ರ ಛತ್ರಪತಿ ಶಿವಾಜಿ ಮಹಾರಾಜರಿಗೆ ನೀಡಿದರು. ಇದೇ ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜರಿಗೆ ಹಿಂದು ಧರ್ಮದ ರಕ್ಷಣೆ ಮಾಡಲು ನಾಂದಿಯಾಯಿತು ಎಂದು ಪಾಲಿಕೆ ಸದಸ್ಯೆ ಪೂಜಾ ಸತೀಶ ಶೇಜವಾಡಕರ ಹೇಳಿದರು.

ಇಲ್ಲಿನ ಜೀಜಾಮಾತಾ ಮರಾಠಾ ಮಹಿಳಾ ಮಂಡಳ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೀಜಾಮಾತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀಜಾಬಾಯಿಯವರು ನೀಡಿದ ಸಂಸ್ಕಾರವೇ ಇಂದು ಹಿಂದು ಧರ್ಮದ ಉಳಿವಿಗೆ ಮುಖ್ಯ ಕಾರಣ. ಪ್ರಸ್ತುತ ಕಾಲಮಾನದಲ್ಲಿ ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಾವೆಲ್ಲ ಜೀಜಾಬಾಯಿಯಂತೆ ನಮ್ಮ ಮಕ್ಕಳನ್ನು ಅಣಿಗೊಳಿಸಬೇಕು ಎಂದರು.

ಸುಮಾ ದಳವಿ, ಮಂಜುಳಾ ಪರಬತ್ ಅತಿಥಿಗಳಾಗಿದ್ದರು. ವಿದ್ಯಾ ಪವಾರ ಅಧ್ಯಕ್ಷತೆ ವಹಿಸಿದ್ದರು.

ರೇಖಾ ಕಾಮಕರ, ರುಕ್ಮಿಣಿಬಾಯಿ ಜಾಧವ, ಮಧುಮತಿ ಶಿಂಧೆ, ಮೀರಾಬಾಯಿ, ಮನಿಷಾ ಶಿಂಧೆ, ಜೊ್ಯೕತಿ ಕಾಮಕರ್, ರೋಹಿಣಿ ಗಾಯಕವಾಡ, ಭಾರತಿ ಮಾನೆ, ರೀತಿಕಾ ಪವಾರ, ಸಂಗೀತಾ ಚವ್ಹಾಣ, ಮಂಜುಳಾ ಶಿಂಧೆ, ಜಯಾ ಜಾಧವ, ಶೋಭಾ ಇಂಗಳೆ ಹಾಗೂ ಇತರರು ಉಪಸ್ಥಿತರಿದ್ದರು. ಮಾಧವಿ ಚವ್ಹಾಣ ನಿರೂಪಿಸಿದರು.

Share This Article

ಕ್ರೆಡಿಟ್​ ಕಾರ್ಡ್​ ಬಳಸುತ್ತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ, ಇಲ್ಲದಿದ್ರೆ… | Credit Cards

Credit Cards: ಇಂದಿನ ಡಿಜಿಟಲ್​ ಯುಗದಲ್ಲಿ ಬಹುತೇಕರು ಕ್ರೆಡಿಟ್​ ಕಾರ್ಡ್ ಬಳಕೆ ಮಾಡುತ್ತಾರೆ. ಪಡೆಯುವ ಉದ್ದೇಶ…

ಐಸ್​​ಕ್ಯೂಬ್​​ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy

Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…