ವಿಷ ಸೇವಿಸಿ ಅಪ್ರಾಪ್ತೆ ಸಾವು: BJP ಕಾರ್ಯಕರ್ತನ ವಿರುದ್ಧ ಪ್ರೇಮ ವಂಚನೆ, ಕಿರುಕುಳ ಆರೋಪ

ಚಿಕ್ಕಮಗಳೂರು: ಅಪ್ತಾಪ್ತೆಯೊಬ್ಬಳು ವಿಷ ಸೇವಿಸಿ, ಸಾವಿಗೆ ಶರಣಾಗಿರುವ ಘಟನೆ ಕುದರೆಮುಖ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಿಜೆಪಿ ಕಾರ್ಯಕರ್ತನ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಕಳಸ ಪದವಿ ಪೂರ್ವ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿ ಜ.10 ರಂದು ಮನೆಯಲ್ಲಿದ್ದ ಕೀಟನಾಶಕವನ್ನು ಸೇವಿಸಿದ್ದಳು. ಆಕೆಯನ್ನು ಮಂಗಳೂರಿನ ಏ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಜ.14) ಮೃತಪಟ್ಟಿದ್ದಾಳೆ. ಅಪ್ರಾಪ್ತೆಯನ್ನು ಪ್ರೀತಿಸಿ ವಂಚಿಸಿರುವುದಲ್ಲದೆ, ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪ ಬಿಜೆಪಿ ಕಾರ್ಯಕರ್ತನಾಗಿ ನಿತೇಶ್ (25)​ ವಿರುದ್ಧ ಕೇಳಿಬಂದಿದೆ. ಸಾಯುವ ಕೊನೆಯ … Continue reading ವಿಷ ಸೇವಿಸಿ ಅಪ್ರಾಪ್ತೆ ಸಾವು: BJP ಕಾರ್ಯಕರ್ತನ ವಿರುದ್ಧ ಪ್ರೇಮ ವಂಚನೆ, ಕಿರುಕುಳ ಆರೋಪ