More

    ವಿದ್ಯಾರ್ಥಿಗಳಿಗೆ ಬರ್ತಡೇ ಪಾರ್ಟಿ ಕೋಡೋಣ ಎಂದ ಸಿಎಂ ಬೊಮ್ಮಾಯಿ‌!

    ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಇವತ್ತು ಕೂಡ ಅವರಿಗೆ ಎಡೆಬಿಡದ ಕಾರ್ಯಕ್ರಮಗಳು. ಸ್ವತಃ ಬೊಮ್ಮಾಯಿ ಅವರೇ ವ್ಯಾಸಂಗ ಮಾಡಿದ ಕೆಎಲ್ಇ ಸಂಸ್ಥೆಯ ಬಿವಿಬಿ ಕಾಲೇಜಿನಲ್ಲಿ ಇವತ್ತು ಸುವರ್ಣ ಮಹೋತ್ಸವ ಸಮಾರಂಭ ಏರ್ಪಾಡಾಗಿತ್ತು.

    ಅಲ್ಲಿ ಭಾಷಣಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ ವಿದ್ಯಾರ್ಥಿಗಳು ಜನ್ಮದಿನಕ್ಕೆ ಶುಭ ಕೋರಿ, ಪಾರ್ಟಿ ಕೇಳಿದರು. ಭಾಷಣದ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಏಕಕಾಲಕ್ಕೆ “ಪಾರ್ಟಿ ಪಾರ್ಟಿ” ಎಂಬ ಕೂಗು ಕೇಳಿ ಬಂತು. ಇದನ್ನು ನೋಡಿ ಹಸನ್ಮುಖಿಯಾದ ಸಿಎಂ ಬಸವರಾಜ ಬೊಮ್ಮಾಯಿ‌ ಅವರು “ಪಾರ್ಟಿ ಕೋಡೋಣ” ಎಂದು ಹೇಳಿ, ತಮ್ಮ ಭಾಷಣ ಆರಂಭಿಸಿದರು.

    ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಚಿವ ಮುರುಗೇಶ್ ನಿರಾಣಿ , ಶಂಕರ ಪಾಟೀಲ ಮುನೇನಕೊಪ್ಪ, ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

    ಹೆಂಡತಿಯನ್ನೇ ಉಸಿರುಗಟ್ಟಿಸಿ ಪರಲೋಕಕ್ಕೆ ಕಳಿಸಿದ ಗಂಡನನ್ನು ಜೈಲಿಗೆ ಅಟ್ಟಿದ ನ್ಯಾಯಾಲಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts