ಚೆನ್ನೈ ನಗರದ ರಸ್ತೆಯೊಂದಕ್ಕೆ ಭಾರತದ ಮಾಜಿ ಆಟಗಾರನ ಹೆಸರಿಡಲು ಜಿಸಿಸಿ ತಯಾರಿ

blank

ಚೆನ್ನೈ: ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಗೌರವಾರ್ಥವಾಗಿ ಚೆನ್ನೈ ನಗರದ ರಸ್ತೆಯೊಂದಕ್ಕೆ ಅವರ ಹೆಸರಿಡಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಸಜ್ಜಾಗಿದೆ. ಶೀಘ್ರದಲ್ಲಿ ರಸ್ತೆಯ ಮರುನಾಮಕರಣವನ್ನು ಅಧಿಕೃತಪಡಿಸಲಾಗುವುದು ಎಂದು ವರದಿಯಾಗಿದೆ.

ಅಶ್ವಿನ್ ಅವರ ತವರು ನಗರ ಹಾಗೂ ಹಾಲಿ ನೆಸೆಸಿರುವ ಪಶ್ಚಿಮ ಮಾಂಬಲಂನಲ್ಲಿರುವ ರಾಮಕೃಷ್ಣಪುರಂ ಮೊದಲನೇ ಬೀದಿಗೆ ಮರುನಾಮಕರಣ ಮಾಡಲು ಜಿಸಿಸಿ ನಿರ್ಧರಿಸಿದೆ. ಅಶ್ವಿನ್ ಒಡೆತನದ ಕೇರಂ ಬಾಲ್ ಈವೆಂಟ್ ಮತ್ತು ಮಾರ್ಕೆಂಟಿಂಗ್ ಕಂಪನಿ ಪ್ರೈವೆಟ್ ಲಿಮಿಟೆಡ್, ನಗರದ ಆರ್ಯಗೌಡ ಅಥವಾ ರಾಮಕೃಷ್ಣಪುರಂ ರಸ್ತೆಗೆ ಮರುನಾಮಕರಣ ಮಾಡುವಂತೆ ಜಿಸಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯ ಪರಿಶೀಲನೆಯ ನಂತರ ಜಿಸಿಸಿ ರಾಮಕೃಷ್ಣಪುರಂ ರಸ್ತೆಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ. ಅಶ್ವಿನ್ ಕಳೆದ ವರ್ಷಾಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

2025ರ ಬಜೆಟ್‌ಗಾಗಿ ಮೇಯರ್ ಆರ್. ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲೂ ‘ರವಿಚಂದ್ರನ್ ಅಶ್ವಿನ್ ಬೀದಿ’ ಎಂದು ಮರುನಾಮಕರಣಕ್ಕೆ ಮಾಡಲಾದ ಪ್ರಸ್ತಾವನೆಗೆ ಸಮ್ಮತಿ ದೊರೆತಿದೆ. ಇದರೊಂದಿಗೆ ಹಾಕಿ ಮಾಜಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ಮತ್ತು ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಾಲಿಗೆ ಅಶ್ವಿನ್ ಸೇರ್ಪಡೆಯಾಗಿದ್ದು, ಪ್ರಪಂಚದಾದ್ಯಂತ ಹಲವು ಬೀದಿಗಳಿಗೆ ಕ್ರಿಕೆಟಿಗರ ಹೆಸರಿಡಲಾಗಿದೆ. ಆರ್.ಅಶ್ವಿನ್ 9 ವರ್ಷಗಳ ಬಳಿಕ ತವರು ್ರಾಂಚೈಸಿ ಸಿಎಸ್‌ಕೆ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದು, ಮೆಗಾ ಹರಾಜಿನಲ್ಲಿ ₹9.75 ಕೋಟಿ ಬಿಡ್ ಪಡೆದುಕೊಂಡಿದ್ದರು.

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…