ವಿಜಯಪುರ: ನಗರದ ಕಸಾಪ ಸಭಾಭವನದಲ್ಲಿ ಭಾನುವಾರ ಕಂದಾಯ ಇಲಾಖೆ ನೌಕರರ ಸಂಘ ಸಹಯೋಗದಲ್ಲಿ ಲಿಂ. ಬಸಪ್ಪ ಅಡಿವೆಪ್ಪ ಬಿಜ್ಜರಗಿ ಹೆಸರಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಜೆ.ಎಸ್. ಪೂಜಾರಿ ಮಾತನಾಡಿ, ದತ್ತಿ ನಿಧಿಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಿದೆ. ನೌಕರರ ಸೇವಾ ಭದ್ರತೆ ಹಾಗೂ ಪಾರದರ್ಶಕ ಆಡಳಿತದ ಕುರಿತು ಏರ್ಪಡಿಸಿರುವ ಈ ದತ್ತಿ ಉಪನ್ಯಾಸ ನೌಕರರ ಸೇವಾ ದಕ್ಷತೆ ಹೆಚ್ಚಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಬಿ.ಎಂ. ಆಜೂರ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಲ್. ಇಂಗಳೇಶ್ವರ ಉಪನ್ಯಾಸ ನೀಡಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಬಸಲಿಂಗಯ್ಯ ಮಠ, ಗುತ್ತಪ್ಪಗೌಡ ರಾಜಾಪುರ, ಬಿ.ಕೆ. ಗೋಟ್ಯಾಳ, ವಿಜಯಲಕ್ಷ್ಮಿ ಹಳಕಟ್ಟಿ, ರಾಜೇಸಾಬ ಶಿವನಗುತ್ತಿ ಮಾತನಾಡಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಸಂಗಮೇಶ ಮೇತ್ರಿ, ಸಿದ್ರಾಮಯ್ಯ ಲಕ್ಕುಂಡಿಮಠ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ಮಹಮ್ಮದ್ಗೌಸ್ ಹವಾಲ್ದಾರ್, ವಿದ್ಯಾವತಿ ಅಂಕಲಗಿ, ಸುರೇಶ ಜತ್ತಿ, ರಜಾಕ ಮುಲ್ಲಾ, ಪ್ರದೀಪ ಕುಲಕರ್ಣಿ, ಕೆ.ಎಸ್. ಹಣಮಾಣಿ, ಅಲಿಸಾಬ ಖಡಕೆ, ಎಫ್.ಅಂಕಲಗಿ, ಶೋಭಾ ಬಡಿಗೇರ, ಭಾಗೀರತಿ ಸಿಂಧೆ, ಅಮಸಿದ್ದ ಪೂಜಾರಿ, ಶಾಂತಾ ವಿಭೂತಿ, ಕಾದರ ವಾಲೀಕಾರ, ಮಕಬುಲ ಕೀಜಿ, ಪರವೀನ ಶೇಖ, ಜಿ.ಎಸ್. ಬಳ್ಳೂರ, ಎಚ್.ಎಸ್. ದೈವಾಡಿ, ಎನ್.ಕೆ. ಕುಂಬಾರ, ಬಿ.ಎಂ. ಮಸಬಿನಾಳ ಮತ್ತಿತರರಿದ್ದರು.
ಮೆಹತಾಬ ಕಾಗವಾಡ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಮಮತಾ ಮುಳಸಾವಳಗಿ ವಂದಿಸಿದರು.