ರಾಜೀವ್​ ಗಾಂಧಿ ಹಂತಕರ ಬಿಡುಗಡೆ: ಆದೇಶ ಮರು ಪರಿಶೀಲಿಸಲು ಕೇಂದ್ರದಿಂದ ಸುಪ್ರೀಂಗೆ ಮೇಲ್ಮನವಿ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಗುರುವಾರ (ನ.17) ಮೇಲ್ಮನವಿ ಸಲ್ಲಿಸಿದೆ. ಅಪರಾಧಿಗಳಾದ ನಳಿನಿ, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪಯಸ್ ಮತ್ತು ರವಿಚಂದ್ರನ್​ರನ್ನು ಕಳೆದ ಶುಕ್ರವಾರ (ನ.11) ಬಿಡುಗಡೆ ಮಾಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿತ್ತು. ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳ ಬೆನ್ನಲ್ಲೇ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. … Continue reading ರಾಜೀವ್​ ಗಾಂಧಿ ಹಂತಕರ ಬಿಡುಗಡೆ: ಆದೇಶ ಮರು ಪರಿಶೀಲಿಸಲು ಕೇಂದ್ರದಿಂದ ಸುಪ್ರೀಂಗೆ ಮೇಲ್ಮನವಿ