ಕನ್ನಡಿಗರ ಕ್ಷಮೆ ಕೋರಿದ್ರು ನಿರ್ಮಲಾ ಸೀತಾರಾಮನ್!; ಎಲ್ಲದಕ್ಕೂ ನಾನೊಬ್ಳೇ ಹೊಣೆ ಅಲ್ಲ ಎಂದಿದ್ದೇಕೆ?

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಕ್ಷಮೆಯನ್ನು ಕೋರಿದ್ದಾರೆ. ಜೊತೆಗೆ ಎಲ್ಲದಕ್ಕೂ ನಾನೊಬ್ಬಳೇ ಹೊಣೆಯಲ್ಲ ಎಂಬುದನ್ನೂ ಒತ್ತಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ನಡೆಸಿದ ಸಂವಾದ ಸಂದರ್ಭದಲ್ಲಿ ಅವರು ಇಂಥದ್ದೊಂದು ಕ್ಷಮೆ ಯಾಚಿಸಿದ್ದಾರೆ. ಕರ್ನಾಟಕದಿಂದ ಆಯ್ಕೆಯಾಗಿ ಹೋದರೂ ಈ ರಾಜ್ಯದ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ ಎಂಬುದಾಗಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆ ನಿಮ್ಮದೋ ಜನರದ್ದೋ ಎಂದು ವರದಿಗಾರರನ್ನೇ ಮರುಪ್ರಶ್ನಿಸಿದ್ದಾರೆ. … Continue reading ಕನ್ನಡಿಗರ ಕ್ಷಮೆ ಕೋರಿದ್ರು ನಿರ್ಮಲಾ ಸೀತಾರಾಮನ್!; ಎಲ್ಲದಕ್ಕೂ ನಾನೊಬ್ಳೇ ಹೊಣೆ ಅಲ್ಲ ಎಂದಿದ್ದೇಕೆ?