ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ಮುಕ್ತಾಯದ ವರದಿಯನ್ನು ಕೇಂದ್ರ ತನಿಖಾ ದಳ(CBI)ದ ಅಧಿಕಾರಿಗಳು ಶನಿವಾರ ಕೋರ್ಟ್ಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಮಾ.26ರವರೆಗೆ ತುಂತುರು ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ
ಮುಚ್ಚುವಿಕೆ ಮಾಹಿತಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14 ರಂದು ಮುಂಬೈನ ಬಾಂದ್ರದಲ್ಲಿರುವ ತಮ್ಮ ಪ್ಲಾಟ್ನಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ನಟ ಸಾವು ಅಭಿಮಾನಿಗಳಿಗೆ ಅಲ್ಲದೆ, ಭಾರತೀಯ ಚಿತ್ರರಂಗಕ್ಕೆ ದಿಗ್ಭ್ರಮೆ ಮೂಡಿಸಿತ್ತು. ಇದು ಹಲವಾರು ಚರ್ಚೆಗಳಿಗೂ ಕಾರಣವಾಯಿತು.ಹೀಗಾಗಿ, ಅವರ ಸಾವಿನ ಬಗ್ಗೆ ಭಾರೀ ಅನುಮಾನಗಳು ಮೂಡಿವೆ ಎಂದು ಹಲವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಇದನ್ನೂ ಓದಿ:ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ದೇವರ ತೆರೆ ಮಹೋತ್ಸವಕ್ಕೆ ಚಾಲನೆ
ವರದಿಯಲ್ಲಿರೊದೇನು..?
ತನಿಖಾ ಸಂಸ್ಥೆಯ ಮುಕ್ತಾಯ ವರದಿಯು ಯಾವುದೇ ರೀತಿಯ ಆಕ್ರಮವಿಲ್ಲ ಆತ್ಮಹತ್ಯೆ ಪ್ರಕರಣ ಎಂದು ಸೂಚಿಸುತ್ತದೆ. ಅಂದರೆ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ವೈಜ್ಞಾನಿಕ ಪುರಾವೆಗಳು ಯಾವುದೇ ಅಕ್ರಮವನ್ನು ತೋರಿಸಿಲ್ಲ, ಆದ್ದರಿಂದ ಅಂತಿಮವಾಗಿ ಮುಕ್ತಾಯ ವರದಿಯನ್ನು ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ನಮ್ಮ ಶಕ್ತಿ ಗೊತ್ತಿದೆ : DK ಶಿವಕುಮಾರ್
ಚಿನ್ನ ಅನೇಕ ವರ್ಷಗಳ ಕಾಲ ಬಳಸದಿದ್ದರೆ ತುಕ್ಕು ಹಿಡಿಯುತ್ತದೆಯೇ!: ವಿಜ್ಞಾನ ಹೇಳೊದೇನು? | Gold Rust