ವೇಗದಲ್ಲಿದ್ದ ಕಾರು ಮರಕ್ಕೆ ಡಿಕ್ಕಿ, ಕುಲಸಚಿವ ಸ್ಥಳದಲ್ಲೇ ಸಾವು; ಜೇನುನೊಣಗಳ ದಾಳಿಗೆ ಅವರ ಪುತ್ರ-ಪತ್ನಿಯ ಸ್ಥಿತಿ ಗಂಭೀರ..

ಬೀದರ್​: ವೇಗವಾಗಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿದ್ದ ಕುಲಸಚಿವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ ಮರದಲ್ಲಿದ್ದ ಜೇನುನೊಣಗಳ ದಾಳಿಗೆ ಅವರ ಪುತ್ರ ಹಾಗೂ ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಬೀದರಿನ ಬಸವಕಲ್ಯಾಣದ ಮುಡಬಿ ಬಳಿ ಈ ಕಾರು ಅಪಘಾತ ಸಂಭವಿಸಿದೆ. ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಸಚಿವ ಲಿಂಗರಾಜ ಶಾಸ್ತ್ರಿ (50) ಮೃತಪಟ್ಟವರು. ಅವರ ಪತ್ನಿ ಶ್ರೀದೇವಿ, ಪುತ್ರ ಕೈಲಾಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಿವೃತ್ತ ಎಸಿಪಿಗೇ ಮೋಸ; ನಿರ್ಮಾಣ್​ ಶೆಲ್ಟರ್ಸ್​ ವಿರುದ್ಧ … Continue reading ವೇಗದಲ್ಲಿದ್ದ ಕಾರು ಮರಕ್ಕೆ ಡಿಕ್ಕಿ, ಕುಲಸಚಿವ ಸ್ಥಳದಲ್ಲೇ ಸಾವು; ಜೇನುನೊಣಗಳ ದಾಳಿಗೆ ಅವರ ಪುತ್ರ-ಪತ್ನಿಯ ಸ್ಥಿತಿ ಗಂಭೀರ..