ಧಗಧಗನೆ ಹೊತ್ತಿ ಉರಿಯಿತು ನಾಲ್ವರಿದ್ದ ಕಾರು: ದೇವಸ್ಥಾನದಿಂದ ಮರಳುವಾಗ ಅವಘಡ..

ಚಿಕ್ಕಬಳ್ಳಾಪುರ: ನಾಲ್ವರು ಪ್ರಯಾಣಿಸುತ್ತಿದ್ದ ಕಾರೊಂದು ಇದ್ದಕ್ಕಿದ್ದಂತೆ ಧಗಧಗನೆ ಹೊತ್ತಿ ಉರಿದು ಆತಂಕದ ವಾತಾವರಣಕ್ಕೆ ಕಾರಣವಾದ ಪ್ರಕರಣವೊಂದು ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ನಗರ ಪೊಲೀಸ್ ಠಾಣೆ ಸಮೀಪದ ಅಂಡರ್​ಪಾಸ್​ನಲ್ಲಿ ಕಾರು ಬರುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಮಾರುತಿ ಕಂಪನಿಯ ಆಲ್ಟೋ ಕಾರು ಇದಾಗಿದ್ದು, ಇದರಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿದ್ದವರು ಮುರುಗಮಲ್ಲಾ ದೇವಸ್ಥಾ‌ನಕ್ಕೆ ಹೋಗಿದ್ದರು. ಅದೃಷ್ಟವಶಾತ್​ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ಬಹುತೇಕ ಸುಟ್ಟುಹೋಗಿದೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನೂ … Continue reading ಧಗಧಗನೆ ಹೊತ್ತಿ ಉರಿಯಿತು ನಾಲ್ವರಿದ್ದ ಕಾರು: ದೇವಸ್ಥಾನದಿಂದ ಮರಳುವಾಗ ಅವಘಡ..