ರಸ್ತೆ ಅಗಲೀಕರಣದ ಎಡವಟ್ಟು, ಕಾರು ಮರಕ್ಕೆ ಡಿಕ್ಕಿ; ಇಬ್ಬರ ಸಾವು, ಮೂವರ ಪರಿಸ್ಥಿತಿ ಗಂಭೀರ

ಆನೇಕಲ್: ರಸ್ತೆ ಅಗಲೀಕರಣದ ವೇಳೆಯಲ್ಲಿನ ಒಂದು ಎಡವಟ್ಟಿನಿಂದಾಗಿ ಕಾರು ಅಪಘಾತಕ್ಕೀಡಾಗಿ, ಇಬ್ಬರು ಸಾವಿಗೀಡಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಮೂವರ ಪರಿಸ್ಥಿತಿ ಗಂಭೀರವಾಗಿದೆ. ಆನೇಕಲ್​-ಥಳಿ ಮುಖ್ಯರಸ್ತೆಯ ಸೋಲೂರು ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಹೊಂಗಸಂದ್ರದ ಶಶಿಧರ್ (31), ಕುಣಿಗಲ್ ಮೂಲದ ಭೈರೇಶ್ (34) ಸಾವಿಗೀಡಾಗಿದ್ದರೆ, ಗಾಯಾಳುಗಳಾದ ರಾಹುಲ್, ಮಿಥುನ್, ತಿಪ್ಪೇಶ್ ಸ್ಥಿತಿ ಚಿಂತಾಜನಕವಾಗಿದೆ. ಈ ಐವರು ಸ್ವಿಫ್ಟ್​ ಕಾರಿನಲ್ಲಿ ಮದಗೊಂಡನಹಳ್ಳಿಗೆ ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಇಲ್ಲಿ ರಸ್ತೆ ಅಗಲೀಕರಣಕ್ಕೆಂದು ಕಡಿದ ಮರವನ್ನು ತೆರವುಗೊಳಿಸಿರಲಿಲ್ಲ. … Continue reading ರಸ್ತೆ ಅಗಲೀಕರಣದ ಎಡವಟ್ಟು, ಕಾರು ಮರಕ್ಕೆ ಡಿಕ್ಕಿ; ಇಬ್ಬರ ಸಾವು, ಮೂವರ ಪರಿಸ್ಥಿತಿ ಗಂಭೀರ