ಕಾರು ಪಲ್ಟಿಯಾಗಿ ಮಗು ಸಾವು, ತಂದೆ-ತಾಯಿ ಪಾರು: ದೇವಸ್ಥಾನದಿಂದ ಮರಳುತ್ತಿರುವಾಗ ಅಪಘಾತ..

ತುಮಕೂರು: ದೇವರ ದರ್ಶನ ಪಡೆದು ಮರಳುತ್ತಿದ್ದವರ ಕಾರು ಪಲ್ಟಿಯಾಗಿ ಎರಡೂವರೆ ತಿಂಗಳ ಮಗು ಸಾವಿಗೀಡಾಗಿದ್ದು, ಸಣ್ಣಪುಟ್ಟ ಗಾಯಕ್ಕೊಳಗಾಗಿರುವ ತಂದೆ-ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಮರ್ಥ ಸಾವಿಗೀಡಾದ ಮಗು. ಪರಮೇಶ್-ರಮ್ಯಾ ಗಾಯಗೊಂಡಿರುವ ತಂದೆ-ತಾಯಿ. ತುಮಕೂರು ಜಿಲ್ಲೆಯ ಕುಣಿಗಲ್​ನ ರಾಷ್ಟ್ರೀಯ ಹೆದ್ದಾರಿ-75ರ ನಾಗೇಗೌಡನ ಪಾಳ್ಯ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಮಾಗಡಿ ತಾಲೂಕಿನ ಕುದೂರು ಹೋಬಳಿಯ ನಾರಸಂದ್ರ ಗ್ರಾಮದ ಪರಮೇಶ್ ಹಾಗೂ ರಮ್ಯ ಇಂದು ಬೆಳಗ್ಗೆ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ … Continue reading ಕಾರು ಪಲ್ಟಿಯಾಗಿ ಮಗು ಸಾವು, ತಂದೆ-ತಾಯಿ ಪಾರು: ದೇವಸ್ಥಾನದಿಂದ ಮರಳುತ್ತಿರುವಾಗ ಅಪಘಾತ..