blank

ಪಾಕ್ ಹೊಲಸು ಎಂದಿದ್ದೇ ಸೆಕ್ಯುಲರ್​ವಾದಿಗಳಿಗೆ ಪಥ್ಯ!

blank

Desha Kala Hariprakash Konemane

ಭಾರತದ ಮುಕುಟ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ತರಹೇವಾರಿ ಚರ್ಚೆಗಳು ನಡೆಯುತ್ತಿವೆ. ಪರ ಮತ್ತು ವಿರುದ್ಧದ ಚರ್ಚೆಗಳು ಬಿರುಸುಗೊಂಡಿವೆ. ಈ ಘಟನೆ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮತ್ತು ಭಾರತ ದೇಶದ ಜನರು ಯಾವೆಲ್ಲ ಸಂಗತಿಗಳ ಕುರಿತು ಹೇಗೆ ಆಲೋಚನೆ ಮಾಡುವುದು ಸರಿಯಾದ ಕ್ರಮ ಎಂಬುದರ ಕುರಿತಾದ ಕೆಲ ಸಂಗತಿಗಳ ಬಗ್ಗೆ ಮಾತ್ರ ನಾನಿಲ್ಲಿ ಚರ್ಚೆ ಮಾಡುವೆ.

blank

ಆರಂಭದಲ್ಲಿ ಒಂದು ಮಾತು. 65 ವರ್ಷಗಳಿಗೂ ಹೆಚ್ಚು ಕಾಲ ವಿನಾಕಾರಣ ಇಸ್ಲಾಮಿಕ್ ಭಯೋತ್ಪಾದಕರು ಕೇವಲ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಬಂದೂಕು, ಬಾಂಬುಗಳಿಂದ ದೇಶದ ಉದ್ದಗಲಕ್ಕೂ ರಕ್ತ ಹರಿಸಿದ ಬಳಿಕವೂ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದನೆಗೆ ನೇರ ಬೆಂಬಲ ಕೊಡುತ್ತಿರುವ, ಪಾಕಿಸ್ತಾನದ ಪರ ಅನುಕಂಪ ವ್ಯಕ್ತಪಡಿಸುತ್ತಿರುವ ಜನರು ಭಾರತದಲ್ಲಿ ಇನ್ನೂ ಇದ್ದಾರೆಂಬುದೇ ದೊಡ್ಡ ದುರಂತ. ‘ಭಯೋತ್ಪಾದಕರನ್ನು ಸಾಕುವ ಮೂಲಕ ನಾವು ಇಷ್ಟು ವರ್ಷ ಕಾಲ ಹೊಲಸು ತಿನ್ನುವ ಕೆಲಸ ಮಾಡುತ್ತಿದ್ದೆವು’ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವರೇ ಹೇಳಿದ ಬಳಿಕವೂ, ನಮ್ಮ ದೇಶದ ಒಂದಿಷ್ಟು ಜನರಿಗೆ ಹೊಲಸೇ ಪಥ್ಯವಾಗಿದೆ.

ಪಹಲ್ಗಾಮ್ ಉಗ್ರರ ದಾಳಿ ನಂತರ ರಾಬರ್ಟ್ ವಾದ್ರಾ ಎಂಬ ಕಾಂಗ್ರೆಸ್ ಪರಿವಾರದ ಮೊದಲ ಕುಟುಂಬದ ಸದಸ್ಯ ಏನು ಪ್ರತಿಕ್ರಿಯೆ ನೀಡಿದರು ಎಂಬುದನ್ನು ನೋಡೋಣ. ಅವರು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಅಳಿಯ ಆಗಿರದೆ ಇದ್ದರೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾವ ಆಗಿರದೆ ಹೋಗಿದ್ದರೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರ ಗಂಡ ಆಗಿರದೆ ಹೋಗಿದ್ದರೆ ಅವರ ಮಾತನ್ನು ಗಂಭೀರವಾಗಿ ಚರ್ಚೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ‘ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷೆಯ ಭಾವನೆ ಇಲ್ಲ, ಅಲ್ಪಸಂಖ್ಯಾತರು ಪೀಡನೆಗೆ ಒಳಗಾಗಿದ್ದಾರೆ. ಅದಕ್ಕಾಗಿ ಭಯೋತ್ಪಾದಕ ದಾಳಿ ನಡೆಯುತ್ತದೆ’ ಎಂದು ರಾಬರ್ಟ್ ವಾದ್ರಾ ಖುಲ್ಲಂಖುಲ್ಲಾ ಹೇಳಿಕೆ ಕೊಟ್ಟಿದ್ದಾರೆ. ನಾನಿದನ್ನು ಪೆದ್ದುತನದ ಹೇಳಿಕೆ ಅಥವಾ ತಿಳಿವಳಿಕೆ ಕೊರತೆ ಎಂದು ತಿದ್ದಿ ತೀಡುವುದಿಲ್ಲ. ಈ ಬಾರಿ ವರಸೆ, ತಂತ್ರ ಬದಲಾಗಿದೆ, ಇವರು ಹೇಳಬೇಕಾದ್ದನ್ನು ಅವರು ಹೇಳಿದ್ದಾರೆ ಅಷ್ಟೆ. ಒಂದು ವೇಳೆ ಭಾರತದ ಜನರು ಅಥವಾ ಹಿಂದೂಗಳು ಅಸಹಿಷ್ಣುಗಳಾಗಿದ್ದರೆ ಸೋನಿಯಾ ಮತ್ತು ರಾಬರ್ಟ್ ಇಬ್ಬರನ್ನೂ ಹತ್ತಿಪ್ಪತ್ತು ವರ್ಷಗಳ ಕಾಲ ದೇಶದ ಅಧಿಕಾರ ಕೇಂದ್ರದ ಆಯಕಟ್ಟಿನ ಜಾಗದಲ್ಲಿ ಸಹಿಸಿಕೊಳ್ಳುತ್ತಿರಲಿಲ್ಲ.

ಅಖಂಡ ಭಾರತದೇಶ ಧರ್ಮದ ಹೆಸರಿನಲ್ಲಿ ತುಂಡಾದ ನಂತರವೂ ಭಾರತದಲ್ಲಿ ಉಳಿಯಲು ಬಯಸುವ ಮುಸ್ಲಿಮರು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಟ್ಟದ್ದು ಈ ದೇಶದ ಸಂವಿಧಾನ ಮತ್ತು ಬಹುಸಂಖ್ಯಾತ ಹಿಂದೂಗಳ ದೊಡ್ಡ ಗುಣ ಎಂಬುದು ವಾದ್ರಾಗೆ ಅರ್ಥವಾಗದ ಸಂಗತಿಯೇ? ಇಸ್ಲಾಂ ಹೆಸರಿನಲ್ಲಿ ಪಾಕಿಸ್ತಾನ ನಿರ್ವಣವಾದ ಬಳಿಕವೂ ಆ ದೇಶಕ್ಕಿಂತಲೂ ಅಧಿಕ ಮುಸ್ಲಿಂ ಜನಸಂಖ್ಯೆ ಇರುವುದು ಭಾರತದಲ್ಲಿ. ಅಷ್ಟು ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ಭಾರತದಷ್ಟು ಮುಸ್ಲಿಂ ಜನಸಂಖ್ಯೆ ಇಲ್ಲ ಎಂಬುದು ವಾದ್ರಾಗೆ ಗೊತ್ತಿಲ್ಲವೇ? ಜನಸಂಖ್ಯೆ ದೃಷ್ಟಿಯಿಂದ ಮಾತ್ರವಲ್ಲ, ಧಾರ್ವಿುಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಇಷ್ಟು ಸ್ವತಂತ್ರವಾಗಿ, ಸುಖವಾಗಿ ಪಾಕಿಸ್ತಾನ ಮಾತ್ರವಲ್ಲ ಬಹುತೇಕ ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರು ಬಾಳಲು ಸಾಧ್ಯವಾಗುತ್ತಿಲ್ಲ ಎಂಬುದು ವಾದ್ರಾಗೆ ಗೊತ್ತಿಲ್ಲವೇ? ಅದರ ಜೊತೆಗೆ ಮುಸ್ಲಿಂ ಬಾಹುಳ್ಯದ ಮತ್ತು ಇಸ್ಲಾಂ ಪ್ರಧಾನವಾದ ರಾಷ್ಟ್ರಗಳಲ್ಲೂ ಭಾರತದಲ್ಲಿ ಇರುವಷ್ಟು ಮುಸ್ಲಿಂ ಜನಸಂಖ್ಯೆ ಇಲ್ಲ ಎಂಬುದನ್ನು ವಾದ್ರಾ ಅರ್ಥ ಮಾಡಿಕೊಳ್ಳಬೇಕಲ್ಲ. ಇನ್ನು ಉದ್ಯೋಗ, ಆಸ್ತಿ ಮತ್ತು ಸ್ವಾತಂತ್ರ್ಯ, ಹಕ್ಕು, ಅಧಿಕಾರ ಎಲ್ಲವೂ ಎಲ್ಲ ಧರ್ವಿುಯರಿಗೂ ಸಮಾನವಾಗಿ ಲಭ್ಯ ಇರುವ ಜಗತ್ತಿನ ಯಾವುದಾದರೂ ರಾಷ್ಟ್ರ ಇದ್ದರೆ ಅದು ಭಾರತ ಮಾತ್ರ ಎಂಬುದು ವಾದ್ರಾಗೆ ಗೊತ್ತಿರಬೇಕಲ್ಲವೇ? ಗೊತ್ತಿಲ್ಲ ಎಂದಲ್ಲ, ಇದೊಂದು ಅನುಕೂಲಸಿಂಧು ಜಾಣಕುರುಡು ಎಂಬುದರಲ್ಲಿ ಯಾವ ಅನುಮಾನ ಬೇಡ.

ಆರ್ಟಿಕಲ್ 370 ರದ್ದತಿ ಕಾರಣವೇ?: ‘ಆರ್ಟಿಕಲ್ 370 ರದ್ದು ಮಾಡಿದ್ದು ಕಾಶ್ಮೀರಿ ಯುವಕರು ಸಿಟ್ಟಿಗೇಳಲು ಕಾರಣ’ ಎಂದು ಕೆಲ ಸೆಕ್ಯುಲರ್ ನಾಯಕರು ಹೇಳುವ ಮಾತು. ಹಾಗಾದರೆ ಅದೇ ಆರ್ಟಿಕಲ್ 370 ಸ್ವಾತಂತ್ರ್ಯ ಬಂದ ಕಾಲದಿಂದಲೂ ಇತ್ತಲ್ಲ? ಆಗ ಕಾಶ್ಮೀರ ನಂದನವನವಾಗಿತ್ತೆ? ಕಾಶ್ಮೀರದಲ್ಲಿ ಆಗ ಶಾಂತಿ ಇತ್ತೇನು? ಹಿಂಸಾಚಾರ ಇರಲಿಲ್ಲವೇನು? ಕಳೆದ 40 ವರ್ಷಗಳಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ, ಬಾಂಬ್ ದಾಳಿಗೆ ಪ್ರಾಣ ಕಳೆದುಕೊಂಡವರು ಲಕ್ಷಕ್ಕೂ ಅಧಿಕ. ಭಯೋತ್ಪಾದನೆಯಿಂದ ಮನೆಮಠ ಕಳೆದುಕೊಂಡು ಬೀದಿಗೆ ಬಂದವರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟ ನಂತರವೂ ಹಿಂಸಾಚಾರ ಮುಂದುವರಿದಿದ್ದು ಸ್ವತಂತ್ರ, ಪ್ರತ್ಯೇಕ ಮುಸ್ಲಿಂ ಕಾಶ್ಮೀರದ ಸ್ಥಾಪನೆಗೋಸ್ಕರ ತಾನೇ?

ಬಂದೂಕು ಹಿಡಿಯುವವರಿಗೆ, ಕಲ್ಲು ಹೊಡೆಯುವವರಿಗೆ, ಬಾಂಬ್ ಸಿಡಿಸುವವರಿಗೆ ಭಾರತದ ಸಾರ್ವಭೌಮತೆ ಬೇಕಿರಲಿಲ್ಲ. ಕಾಶ್ಮೀರದಲ್ಲಿ ಭಾರತದ ಸಾರ್ವಭೌಮತೆ ಸ್ಥಾಪನೆ ಪಂಡಿತ್ ನೆಹರು ಮತ್ತು ನಂತರ ಬಂದ ಅವರ ವಾರಸುದಾರರಿಗೆ ಬೇಕಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡಕ್ಕೆ ಕಾಶ್ಮೀರವೂ ಸೇರಿ ಭಾರತದ ಇಂಚಿಂಚು ನೆಲದಲ್ಲಿ ಭಾರತದ ಸಾರ್ವಭೌಮತೆ ಸಾರುವುದು ಬೇಕಿತ್ತೆ ಹೊರತು ಬೇರೇನೂ ಅಲ್ಲ. ಅದಕ್ಕೇ ಆರ್ಟಿಕಲ್ 370 ಅನ್ನುವ ಮತಾಂಧರ ದೇಶದ್ರೋಹಿ ಅಸ್ತ್ರವನ್ನು ಕಿತ್ತು ಬಿಸಾಕಿದ್ದು. ಇಷ್ಟೇ ವ್ಯತ್ಯಾಸ! ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಓರ್ವ ಅಮಾಯಕನ ಪ್ರಾಣವೂ ಅಷ್ಟೇ ಮುಖ್ಯ. ಅದು ನಗಣ್ಯ ಎನ್ನಲು ಸಾಧ್ಯವಿಲ್ಲ. ಮೊನ್ನೆ ಮೊನ್ನೆ ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವ ಕಳೆದುಕೊಂಡ 26 ಅಮಾಯಕರ ಪ್ರಾಣವೂ ನಮಗೆ ಅಷ್ಟೇ ಮುಖ್ಯ. ಆದರೆ ಆರ್ಟಿಕಲ್ 370 ರದ್ದತಿ ನಂತರ ಅಲ್ಲೊಂದು ಇಲ್ಲೊಂದು ಬಿಡಿ ಪ್ರಕರಣಗಳಲ್ಲಿ ಇದೂ ಒಂದು. ಕಾಶ್ಮೀರ ಶೇಕಡ 99ರಷ್ಟು ಭಾರತ ಸರ್ಕಾರದ ಸುಪರ್ದಿಗೆ ಬಂದಿದೆ. ಇನ್ನೂ ಒಂದು ಪರ್ಸೆಂಟ್ ಬರುವುದು ಬಾಕಿ ಇದೆ. ಅದೂ ಬರುವ ಕಾಲ ದೂರ ಇಲ್ಲ. ಭರವಸೆ ಇಟ್ಟುಕೊಳ್ಳೋಣ. 2014ರ ಹಿಂದಿನ ಭಾರತವನ್ನು ಕಣ್ಣ ಮುಂದೆ ತಂದುಕೊಳ್ಳಿ. ಅದಕ್ಕೂ ಮುಂಚೆ ಭಾರತದಲ್ಲಿ ಎಲ್ಲಿ ಬೇಕೆಂದರಲ್ಲಿ ಯಾವಾಗ ಬೇಕಾದರೆ ಆವಾಗ ಜಿಹಾದಿ ಮನಸ್ಥಿತಿಯವರು ಬಾಂಬ್​ಸ್ಪೋಟ ಮಾಡುತ್ತಲೇ ಇದ್ದರು. ಇಂದು ಆ ಸಾಧ್ಯತೆ ತೀರಾ ಕ್ಷೀಣವಾಗಿದೆ. ಈ ಸಂಗತಿ ವಾದ್ರಾ ಸಂತತಿ ಬಿಟ್ಟು ಬೇರೆಲ್ಲರಿಗೂ ಗೊತ್ತೇ ಇದೆ.

ಕಾಶ್ಮೀರ ಬದಲಾಗಿದೆ: ಆರ್ಟಿಕಲ್ 370 ರದ್ದತಿ ಬಳಿಕ 2024ರಲ್ಲೇ ದೇಶ-ವಿದೇಶಗಳ 2 ಕೋಟಿಗೂ ಅಧಿಕ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮದಿಂದ ವಾರ್ಷಿಕ ಒಂದು ಲಕ್ಷ ಕೋಟಿಗೂ ಹೆಚ್ಚು ಆದಾಯ ಅಲ್ಲಿನ ಸರ್ಕಾರಕ್ಕೆ, ಸಹಸ್ರಾರು ದುಡಿಯುವ ಕೈಗಳಿಗೆ ಉದ್ಯೋಗ ಲಭ್ಯವಾಗಿದೆ. ಪ್ರವಾಸೋದ್ಯಮ ಒಂದರಿಂದಲೇ ಕಾಶ್ಮೀರದ ಭವಿಷ್ಯದ ಭಾಷ್ಯ ಬರೆಯುವ ಕಾಲ ಸನ್ನಿಹಿತವಾಗಿದೆ. ಅಲ್ಲಿನ ಯುವಕರು, ತಾಯಂದಿರು ಯೋಚನೆ ಮಾಡಬೇಕಿ ರುವುದು ಹೊಟ್ಟೆ ತುಂಬುವುದು ಬಂದೂಕೆ? ಬಾಂಬೇ? ಮತಾಂಧತೆಯೇ? ಯಾವುದು ಎಂಬುದನ್ನು. ಇದು ದೇಶ, ಜೀವ ಮತ್ತು ಮಾನವೀಯತೆಗಿಂತ ಧರ್ಮವೇ ಹೆಚ್ಚೆನ್ನುವವರಿಗೆ ಅರ್ಥ ಆಗುವ ಸಂಗತಿ ಅಲ್ಲವೇ ಅಲ್ಲ.

ಭಯೋತ್ಪಾದನೆಗೆ ಧರ್ಮ ಇಲ್ಲವೇ?: ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂಬುದು ತೀವ್ರ ಜಾತಿವಾದಿಗಳು ಜಾತ್ಯತೀತತೆ ಕುರಿತು ಬೋಧನೆ ಮಾಡುವಷ್ಟೇ ಹಾಸ್ಯಾಸ್ಪದ. ಪಾಕಿಸ್ತಾನದಿಂದ ಹಿಡಿದು ಪ್ರಪಂಚದಾದ್ಯಂತ ಭಯೋತ್ಪಾದನೆ ಪಸರಿಸುತ್ತಿರುವುದು ಕೇವಲ ಧರ್ಮಸಾಮ್ರಾಜ್ಯ ವಿಸ್ತರಣೆಗೆ ಮಾತ್ರ. ಇಸ್ಲಾಂ ಮತಾಂಧತೆ ಪ್ರಪಂಚದಲ್ಲಿ ಹತ್ತಾರು ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದು ಹಗಲಿನಷ್ಟೇ ಸತ್ಯ. ಧರ್ವಂಧರು ಭಯೋತ್ಪಾದನೆಗೆ ಬೆಂಬಲ ಕೊಡುವುದನ್ನು ಎಂದು ನಿಲ್ಲಿಸುತ್ತಾರೋ ಅಂದೇ ಇಸ್ಲಾಮಿಕ್ ಭಯೋತ್ಪಾದನೆ ಖತಂ ಆಗುತ್ತದೆ. ಆ ಧರ್ಮದ ಜಾಗತಿಕ ಪ್ರಮುಖರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಭಯೋತ್ಪಾದನೆಗೆ ಧರ್ಮದ ನಂಟಿದೆ ಎಂಬುದಕ್ಕೆ ಪಹಲ್ಗಾಮ್ ಘಟನೆ ಒಂದು ಲೇಟೆಸ್ಟ್ ಉದಾಹರಣೆ. ಹಿಂದೂ ಪ್ರವಾಸಿಗರ ಹಣೆಗೇ ಬಂದೂಕಿನ ಮೊನೆ ಇಡುವ ಮುನ್ನ ರಾಕ್ಷಸರು ಕೇಳಿದ್ದು ಅವರ ಹೆಸರು ಮತ್ತು ಧರ್ಮವನ್ನು. ಈಗ ಹೇಳಿ, ಇದು ಧರ್ವಂಧತೆಯೋ ಅಥವಾ ಮತ್ತಿನ್ನೇನು ಅಂತ!

ಹೆಂಡತಿ ಮಕ್ಕಳ ಬಿಟ್ಟಿದ್ದೇಕೆ?: ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ಇಸ್ಲಾಮಿಕ್ ಭಯೋತ್ಪಾದನೆಯ ಮೂಲತತ್ವ ಮತ್ತು ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಕ್ತ ಹರಿಸಿ, ಸಾವನ್ನು ತೋರಿಸಿ ಧರ್ವನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದು ಭಯೋತ್ಪಾದನೆಯ ಮಾರ್ಗ ಮತ್ತು ಗುರಿ. ಇದು ಇಡೀ ಜಗತ್ತಿನಲ್ಲಿ ಒಂದೇ ತೆರನಾದದ್ದು. ಉದಾಹರಣೆ ಕೊಡಬೇಕಾದ ಅಗತ್ಯವೇ ಇಲ್ಲ. ಪಹಲ್ಗಾಮ್ ಘಟನೆ ಸಂದರ್ಭದಲ್ಲೂ ರಕ್ತ ಪಿಪಾಸುಗಳು ಅನುಸರಿಸಿದ್ದು ಅದೇ ಮಾರ್ಗ. ಕಣ್ಣೆದುರೇ ಮನೆಯ ಯಜಮಾನನನ್ನು ಕೊಂದು ಉಳಿದವರು ಭಯದಿಂದ ತಮ್ಮ ಹಾದಿಗೆ ಬರುವಂತೆ ನೋಡಿಕೊಳ್ಳುವುದು. ಅದಕ್ಕೆ ಉತ್ತರ ಏನು ಗೊತ್ತಾ? ನಮ್ಮ ತಾಯಂದಿರು, ಕಂದಮ್ಮಗಳು ‘ನಮ್ಮನ್ನೇಕೆ ಬಿಡುತ್ತೀರಿ? ನಮ್ಮನ್ನೂ ಕೊಲ್ಲಿ’ ಎಂಬ ಉತ್ತರ. ಈ ಉತ್ತರ ಪ್ರತಿ ಭಾರತೀಯನ ಮನೆ ಮತ್ತು ಮನದಿಂದ ಮಾರ್ದನಿಸಬೇಕಿದೆ. ಅದೊಂದೇ ಈ ಧರ್ವಂಧರಿಗೆ ನಾವು ಕೊಡಬಹುದಾದ ಉತ್ತರ.

ಆಲೋಚನೆ ಮಾಡಬೇಕಿರುವುದೇನು?: ಭಯೋತ್ಪಾದನೆಯಿಂದ ದಟ್ಟ ದರಿದ್ರವಾಗಿದ್ದ ಕಾಶ್ಮೀರ ಕೇಂದ್ರ ಸರ್ಕಾರದ ಕಠಿಣ ನಿಲುವಿನ ಪರಿಣಾಮ ಭೂಮಿಯ ಮೇಲಿನ ನಿಜವಾದ ಸ್ವರ್ಗವಾಗುವ ಹಾದಿಯಲ್ಲಿತ್ತು. ಪ್ರತ್ಯೇಕತಾವಾದಿಗಳಿಗೆ, ಮತಾಂಧರಿಗೆ ಅದು ಬೇಕಿರಲಿಲ್ಲ. ದುಡಿದು ಅನ್ನ ತಿನ್ನಬೇಕಾದ ಸ್ಥಳೀಯರು ಮತಾಂಧರಿಗೆ ಆಶ್ರಯ, ಬೆಂಬಲ ಕೊಟ್ಟು ಹೊಲಸು ತಿನ್ನುವ ಕೆಲಸಕ್ಕೆ ಕೈಹಾಕುತ್ತಾರೆಂದರೆ ಏನು ಹೇಳಬೇಕು? ಆಲೋಚನೆ ಮಾಡಿ.

ಅಂತಿಮವಾಗಿ ಏನಾಗಬೇಕು?: ಮತಾಂಧತೆಗೆ ಮಣ್ಣು ಮುಕ್ಕಿಸಬೇಕಾದರೆ ಕೇಂದ್ರ ಸರ್ಕಾರ ಭಯೋತ್ಪಾದನೆಗೆ ಈಗ ತೋರಿಸುತ್ತಿರುವ ಶೂನ್ಯ ಸಹನೆಯನ್ನು ಮುಂದುವರಿಸಬೇಕು. ಸರ್ಕಾರದ ಜೊತೆಗೆ ಭಾರತದ ಪ್ರತಿಯೊಬ್ಬ ಪ್ರಜೆ ಮತ್ತು ಧಾರ್ವಿುಕ ನಾಯಕರು ಕಟಿಬದ್ಧವಾಗಿ ನಿಲ್ಲಬೇಕು. ಅಂತಿಮವಾಗಿ ಎಲ್ಲರೂ ಹಾಗೆ ನಡೆದುಕೊಳ್ಳುವಂತೆ ಸರ್ಕಾರ ಶತಾಯಗತಾಯ ಮಾಡಬೇಕು. ಮತಾಂಧ, ದುಷ್ಟ ಹಮಾಸ್​ಗಳನ್ನು ಪುಟ್ಟ ಇಸ್ರೇಲ್ ಹೊಸಕಿ ಹಾಕಿದಂತೆ ಭಾರತವು ಪಾಕಿಸ್ತಾನವನ್ನು ಹೊಸಕಿ ಹಾಕುವ ದಿನವನ್ನು ಎದುರು ನೋಡೋಣ, ಅಲ್ಲವೇ?

ಜಾಗತಿಕ ನಕಾಶೆಯಿಂದ ಪಾಕಿಸ್ತಾನ ಎಂಬ ಪಾಪದ ಕೂಸನ್ನು ಅಳಿಸಿಹಾಕುವುದೊಂದೇ ಈ ಸಮಸ್ಯೆಗೆ ಶಾಶ್ವತ ಪರಿಹಾರ.

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…